ಬೆಂಗಳೂರು, ಫೆ. 19– ದರ ಸಲಹಾ ಸಮಿತಿಯ ಶಿಫಾರಸ್ಸಿನಂತೆ ರಾಜ್ಯದಲ್ಲಿ ಬಸ್ ದರವನ್ನು ಗ್ರಾಮಾಂತರ ಪ್ರದೇಶದಲ್ಲಿ ಶೇ 35ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ 40ರಷ್ಟು ಏರಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯ ಅವರು ಇಂದು ವಿಧಾನಪರಿಷತ್ತಿನಲ್ಲಿ ಹೇಳಿದರು.
ಕಾಂಗ್ರೆಸ್ನ ಕೆಂಪಮ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಸ್ತೆ ಸಾರಿಗೆ ಸಂಸ್ಥೆಯು ಅತ್ಯಂತ ದುರಾವಸ್ಥೆಯಲ್ಲಿದ್ದು, 166 ಕೋಟಿ ರೂಪಾಯಿ ಬಾಕಿ ನೀಡಬೇಕಿರುವುದರಿಂದ ಬಿಡಿಭಾಗಗಳನ್ನು ಕೊಳ್ಳುವ ಸ್ಥಿತಿಯಲ್ಲಿ ಸಹ ಇಲ್ಲ’ ಎಂದು ತಿಳಿಸಿದರು.