<p><strong>ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ</strong></p>.<p>ಬೆಂಗಳೂರು, ಏ. 1– ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಹಿರಿಯ ಸಚಿವರಾದ ಆರ್.ಎಲ್.ಜಾಲಪ್ಪ,ಪಿ.ಜಿ.ಆರ್.ಸಿಂಧ್ಯ, ವೈಜನಾಥ್ ಪಾಟೀಲ್ ಮತ್ತು ಶಿವಾನಂದ ಕೌಜಲಗಿ ಅವರೂ ಸೇರಿದಂತೆ ಒಟ್ಟು ಏಳು ಜನ ಸಚಿವರಿಗೆ ರಾಜ್ಯ ಜನತಾ ದಳದ ಸಂಸದೀಯ ಮಂಡಲಿ ಆದೇಶ ನೀಡಿದೆ.</p>.<p>ಚುನಾವಣೆಯಲ್ಲಿ ಸ್ಪರ್ಧಿಸಲು ಬಹುತೇಕ ಸಚಿವರು ಹಿಂದೇಟು ಹಾಕುತ್ತಿರುವಾಗಲೇ ಸಚಿವರಿಗೆ ಮಂಡಲಿ ಈ ಆದೇಶ ನೀಡಿರುವುದು ದಳದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.</p>.<p><strong>ಹವಾಲ: 7 ಮಾಜಿ ಸಚಿವರಿಗೆ ಟಿಕೆಟ್ ಇಲ್ಲ</strong></p>.<p>ನವದೆಹಲಿ, ಏ. 1 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಏಳು ಮಾಜಿ ಸಚಿವರಿಗೆ ಲೋಕಸಭಾ ಚುನಾವಣೆಗೆ ಕಾಂಗೈ ಟಿಕೆಟ್ ನಿರಾಕರಿಸಿದೆ. ಇವರಲ್ಲಿ ಬಲರಾಂ ಜಾಖಡ್, ಆರ್.ಕೆ.ಧವನ್, ಮಾಧವರಾವ್ ಸಿಂಧಿಯಾ, ವಿ.ಸಿ.ಶುಕ್ಲಾ, ಬೂಟಾ ಸಿಂಗ್, ಕಮಲನಾಥ್, ಅರವಿಂದ ನೇತಂ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಮಪತ್ರ ಸಲ್ಲಿಸಲು ರಾಜ್ಯದ ಏಳು ಸಚಿವರಿಗೆ ದಳ ಆದೇಶ</strong></p>.<p>ಬೆಂಗಳೂರು, ಏ. 1– ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವಂತೆ ಹಿರಿಯ ಸಚಿವರಾದ ಆರ್.ಎಲ್.ಜಾಲಪ್ಪ,ಪಿ.ಜಿ.ಆರ್.ಸಿಂಧ್ಯ, ವೈಜನಾಥ್ ಪಾಟೀಲ್ ಮತ್ತು ಶಿವಾನಂದ ಕೌಜಲಗಿ ಅವರೂ ಸೇರಿದಂತೆ ಒಟ್ಟು ಏಳು ಜನ ಸಚಿವರಿಗೆ ರಾಜ್ಯ ಜನತಾ ದಳದ ಸಂಸದೀಯ ಮಂಡಲಿ ಆದೇಶ ನೀಡಿದೆ.</p>.<p>ಚುನಾವಣೆಯಲ್ಲಿ ಸ್ಪರ್ಧಿಸಲು ಬಹುತೇಕ ಸಚಿವರು ಹಿಂದೇಟು ಹಾಕುತ್ತಿರುವಾಗಲೇ ಸಚಿವರಿಗೆ ಮಂಡಲಿ ಈ ಆದೇಶ ನೀಡಿರುವುದು ದಳದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.</p>.<p><strong>ಹವಾಲ: 7 ಮಾಜಿ ಸಚಿವರಿಗೆ ಟಿಕೆಟ್ ಇಲ್ಲ</strong></p>.<p>ನವದೆಹಲಿ, ಏ. 1 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಏಳು ಮಾಜಿ ಸಚಿವರಿಗೆ ಲೋಕಸಭಾ ಚುನಾವಣೆಗೆ ಕಾಂಗೈ ಟಿಕೆಟ್ ನಿರಾಕರಿಸಿದೆ. ಇವರಲ್ಲಿ ಬಲರಾಂ ಜಾಖಡ್, ಆರ್.ಕೆ.ಧವನ್, ಮಾಧವರಾವ್ ಸಿಂಧಿಯಾ, ವಿ.ಸಿ.ಶುಕ್ಲಾ, ಬೂಟಾ ಸಿಂಗ್, ಕಮಲನಾಥ್, ಅರವಿಂದ ನೇತಂ ಸೇರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>