<p><strong>ಶುಕ್ಲಾ, ಸಿಂಧಿಯಾ, ಜಾಖಡ್ ರಾಜೀನಾಮೆ</strong></p>.<p>ನವದೆಹಲಿ, ಜ. 17 (ಪಿಟಿಐ)– 65 ಕೋಟಿ ರೂ. ಹವಾಲ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಮೂವರು ಕೇಂದ್ರ ಸಚಿವರಾದ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ವಿ.ಸಿ. ಶುಕ್ಲಾ, ಕೃಷಿ ಸಚಿವ ಬಲರಾಂ ಜಾಖಡ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮಾಧವರಾವ್ ಸಿಂಧಿಯಾ ಅವರು ಇಂದು ರಾತ್ರಿ ರಾಜೀನಾಮೆ ನೀಡಿದರು.</p>.<p>ಹವಾಲ ಹಗರಣದಲ್ಲಿ ಯಾವುದೇ ರೀತಿಯ ಪಾತ್ರ ಇಲ್ಲವಾದರೂ ಸುಪ್ರೀಂ ಕೋರ್ಟಿನ ಸೂಚನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಮೂವರು ಸಚಿವರೂ ಸಿಬಿಐ ಕ್ರಮವನ್ನು ಪ್ರಶ್ನಿಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.</p>.<p>ರಾಜಕೀಯ ವಲಯವನ್ನು ತಲ್ಲಣಗೊಳಿಸಿರುವ ಹವಾಲ ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಸದ್ಯದಲ್ಲಿಯೇ ಮತ್ತೆ ಸುಮಾರು 25 ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ವಿರುದ್ಧ ವಿ.ಬಿ. ಗುಪ್ತಾ ನೇತೃತ್ವದ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದೆ.</p>.<p><strong>ಹವಾಲ ಎಂದರೇನು?</strong></p>.<p>ನವದೆಹಲಿ, ಜ. 17– ಹವಾಲ ವ್ಯವಹಾರವು ಅಧಿಕೃತ ವಿದೇಶಿ ವಿನಿಮಯ ವ್ಯವಹಾರದ ಹೊರಗೆ ನಡೆಯುವ ಒಂದು ಅಕ್ರಮ ದಂಧೆ.</p>.<p>ಈ ದಂಧೆ ನಡೆಸುವ ಏಜೆಂಟರು ವಿದೇಶಗಳಿಗೆ ಹೋಗುವವರು. ಇಲ್ಲವೇ ರೂಪಾಯಿಯನ್ನು ಡಾಲರ್ ರೂಪದಲ್ಲಿ ಪಡೆಯಲು ಬಯಸುವವರಿಗೆ ಅಕ್ರಮ ವ್ಯವಹಾರದ ಮೂಲಕ ರೂಪಾಯಿಯನ್ನು ಪಡೆದು ಡಾಲರ್ಗೆ ಪರಿವರ್ತಿಸಿಕೊಡುವವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶುಕ್ಲಾ, ಸಿಂಧಿಯಾ, ಜಾಖಡ್ ರಾಜೀನಾಮೆ</strong></p>.<p>ನವದೆಹಲಿ, ಜ. 17 (ಪಿಟಿಐ)– 65 ಕೋಟಿ ರೂ. ಹವಾಲ ಹಗರಣದಲ್ಲಿ ಸಿಬಿಐ ಹೆಸರಿಸಿರುವ ಮೂವರು ಕೇಂದ್ರ ಸಚಿವರಾದ ಜಲಸಂಪನ್ಮೂಲ ಅಭಿವೃದ್ಧಿ ಸಚಿವ ವಿ.ಸಿ. ಶುಕ್ಲಾ, ಕೃಷಿ ಸಚಿವ ಬಲರಾಂ ಜಾಖಡ್ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮಾಧವರಾವ್ ಸಿಂಧಿಯಾ ಅವರು ಇಂದು ರಾತ್ರಿ ರಾಜೀನಾಮೆ ನೀಡಿದರು.</p>.<p>ಹವಾಲ ಹಗರಣದಲ್ಲಿ ಯಾವುದೇ ರೀತಿಯ ಪಾತ್ರ ಇಲ್ಲವಾದರೂ ಸುಪ್ರೀಂ ಕೋರ್ಟಿನ ಸೂಚನೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೂ ಮುನ್ನ ಮೂವರು ಸಚಿವರೂ ಸಿಬಿಐ ಕ್ರಮವನ್ನು ಪ್ರಶ್ನಿಸಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು.</p>.<p>ರಾಜಕೀಯ ವಲಯವನ್ನು ತಲ್ಲಣಗೊಳಿಸಿರುವ ಹವಾಲ ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಸದ್ಯದಲ್ಲಿಯೇ ಮತ್ತೆ ಸುಮಾರು 25 ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳ ವಿರುದ್ಧ ವಿ.ಬಿ. ಗುಪ್ತಾ ನೇತೃತ್ವದ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದೆ.</p>.<p><strong>ಹವಾಲ ಎಂದರೇನು?</strong></p>.<p>ನವದೆಹಲಿ, ಜ. 17– ಹವಾಲ ವ್ಯವಹಾರವು ಅಧಿಕೃತ ವಿದೇಶಿ ವಿನಿಮಯ ವ್ಯವಹಾರದ ಹೊರಗೆ ನಡೆಯುವ ಒಂದು ಅಕ್ರಮ ದಂಧೆ.</p>.<p>ಈ ದಂಧೆ ನಡೆಸುವ ಏಜೆಂಟರು ವಿದೇಶಗಳಿಗೆ ಹೋಗುವವರು. ಇಲ್ಲವೇ ರೂಪಾಯಿಯನ್ನು ಡಾಲರ್ ರೂಪದಲ್ಲಿ ಪಡೆಯಲು ಬಯಸುವವರಿಗೆ ಅಕ್ರಮ ವ್ಯವಹಾರದ ಮೂಲಕ ರೂಪಾಯಿಯನ್ನು ಪಡೆದು ಡಾಲರ್ಗೆ ಪರಿವರ್ತಿಸಿಕೊಡುವವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>