ನವದೆಹಲಿ, ಮೇ 27 (ಪಿಟಿಐ)– ಹನ್ನೊಂದು ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಇಂದು ಲೋಕಸಭೆಯಲ್ಲಿ ವಿಶ್ವಾಸಮತ ನಿರ್ಣಯ ಮಂಡಿಸಿತು. ನಿರ್ಣಯದ ಮೇಲಿನ ಚರ್ಚೆ ಅಪೂರ್ಣಗೊಂಡಿದ್ದು ನಾಳೆ ಮಧ್ಯಾಹ್ನ 1.30ಕ್ಕೆ ಇದನ್ನು ಮತಕ್ಕೆ ಹಾಕುವುದರೊಂದಿಗೆ ಬಿಜೆಪಿ– ಶಿವಸೇನೆ ನೇತೃತ್ವದ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.