<p><strong>ಚರಾರ್–ಎ–ಷರೀಫ್ ದರ್ಗಾಕ್ಕೆ ಉಗ್ರಗಾಮಿಗಳಿಂದ ಬೆಂಕಿ</strong></p>.<p><strong>ಶ್ರೀನಗರ, ಮೇ 11 (ಪಿಟಿಐ, ಯುಎನ್ಐ)–</strong> ಕಾಶ್ಮೀರ ಕಣಿವೆಯ ಚರಾರ್–ಎ–ಷರೀಫ್ ಪಟ್ಟಣದಲ್ಲಿ ‘ನಂದ ರುಷಿ’ ಎಂದೇ ಹೆಸರಾಗಿದ್ದ ಸೂಫಿ ಸಂತ ಷೇಖ್ ನೂರುದ್ದೀನ್ ವಾಲಿ ಅವರ 535 ವರ್ಷ ಹಳೆಯ ಪವಿತ್ರ ದರ್ಗಾ ಮತ್ತು ಪಕ್ಕದ ಖನಕ್ ಹಾಗೂ ಹಸಿರು<br />ಮಸೀದಿ ಇಂದು ಬೆಳಗಿನ ಜಾವ ವಿದೇಶಿ ಬಾಡಿಗೆ ಹಂತಕರು ಮತ್ತು ಉಗ್ರಗಾಮಿಗಳು ಹಚ್ಚಿದ ಬೆಂಕಿಯಿಂದ ಪೂರ್ಣ ನಾಶವಾಯಿತು.</p>.<p>ದುಷ್ಕೃತ್ಯ ನಡೆಸಿ ಉಗ್ರಗಾಮಿಗಳು ಪರಾರಿಯಾಗುವುದನ್ನು ತಡೆಯಲು ಭದ್ರತಾ ಪಡೆಗಳು ಪಟ್ಟಣ ಸುತ್ತುವರಿದಿದ್ದು, ನಂತರದ ಭೀಕರ ಗುಂಡಿನ ಚಕಮಕಿಯಲ್ಲಿ 30ಕ್ಕೂ ಹೆಚ್ಚು ಉಗ್ರಗಾಮಿಗಳು ಮತ್ತು ಸುಮಾರು ಏಳು ಸೈನಿಕರು ಸತ್ತಿದ್ದಾರೆ ಎಂದು ವರದಿಯಾಗಿದೆ.</p>.<p class="Subhead">ಹೊಸ ನೀತಿ: ಪೂಜಾ ಸ್ಥಳಗಳ ಪಾವಿತ್ರ್ಯ ರಕ್ಷಣೆಗೆ ಹೊಸ ನೀತಿಯೊಂದನ್ನು ರೂಪಿಸುವುದಾಗಿ ಈ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್ ಘೋಷಿಸಿದ್ದಾರೆ.</p>.<p><strong>ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ</strong></p>.<p><strong>ಧಾರವಾಡ, ಮೇ 11–</strong> ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪ್ರಸಕ್ತ ಇರುವುದಕ್ಕಿಂತ ಹೆಚ್ಚಿನ ಅಧಿಕಾರ ಹಾಗೂ ಸವಲತ್ತುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಹಿಂದೆ ರಚಿಸಿರುವ ಪರಿಣತರ ಸಮಿತಿಯ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ರಾಜ್ ಸಚಿವ<br />ಎಂ.ಪಿ. ಪ್ರಕಾಶ್ ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚರಾರ್–ಎ–ಷರೀಫ್ ದರ್ಗಾಕ್ಕೆ ಉಗ್ರಗಾಮಿಗಳಿಂದ ಬೆಂಕಿ</strong></p>.<p><strong>ಶ್ರೀನಗರ, ಮೇ 11 (ಪಿಟಿಐ, ಯುಎನ್ಐ)–</strong> ಕಾಶ್ಮೀರ ಕಣಿವೆಯ ಚರಾರ್–ಎ–ಷರೀಫ್ ಪಟ್ಟಣದಲ್ಲಿ ‘ನಂದ ರುಷಿ’ ಎಂದೇ ಹೆಸರಾಗಿದ್ದ ಸೂಫಿ ಸಂತ ಷೇಖ್ ನೂರುದ್ದೀನ್ ವಾಲಿ ಅವರ 535 ವರ್ಷ ಹಳೆಯ ಪವಿತ್ರ ದರ್ಗಾ ಮತ್ತು ಪಕ್ಕದ ಖನಕ್ ಹಾಗೂ ಹಸಿರು<br />ಮಸೀದಿ ಇಂದು ಬೆಳಗಿನ ಜಾವ ವಿದೇಶಿ ಬಾಡಿಗೆ ಹಂತಕರು ಮತ್ತು ಉಗ್ರಗಾಮಿಗಳು ಹಚ್ಚಿದ ಬೆಂಕಿಯಿಂದ ಪೂರ್ಣ ನಾಶವಾಯಿತು.</p>.<p>ದುಷ್ಕೃತ್ಯ ನಡೆಸಿ ಉಗ್ರಗಾಮಿಗಳು ಪರಾರಿಯಾಗುವುದನ್ನು ತಡೆಯಲು ಭದ್ರತಾ ಪಡೆಗಳು ಪಟ್ಟಣ ಸುತ್ತುವರಿದಿದ್ದು, ನಂತರದ ಭೀಕರ ಗುಂಡಿನ ಚಕಮಕಿಯಲ್ಲಿ 30ಕ್ಕೂ ಹೆಚ್ಚು ಉಗ್ರಗಾಮಿಗಳು ಮತ್ತು ಸುಮಾರು ಏಳು ಸೈನಿಕರು ಸತ್ತಿದ್ದಾರೆ ಎಂದು ವರದಿಯಾಗಿದೆ.</p>.<p class="Subhead">ಹೊಸ ನೀತಿ: ಪೂಜಾ ಸ್ಥಳಗಳ ಪಾವಿತ್ರ್ಯ ರಕ್ಷಣೆಗೆ ಹೊಸ ನೀತಿಯೊಂದನ್ನು ರೂಪಿಸುವುದಾಗಿ ಈ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್ ಘೋಷಿಸಿದ್ದಾರೆ.</p>.<p><strong>ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ</strong></p>.<p><strong>ಧಾರವಾಡ, ಮೇ 11–</strong> ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪ್ರಸಕ್ತ ಇರುವುದಕ್ಕಿಂತ ಹೆಚ್ಚಿನ ಅಧಿಕಾರ ಹಾಗೂ ಸವಲತ್ತುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಹಿಂದೆ ರಚಿಸಿರುವ ಪರಿಣತರ ಸಮಿತಿಯ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ರಾಜ್ ಸಚಿವ<br />ಎಂ.ಪಿ. ಪ್ರಕಾಶ್ ಇಂದು ಇಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>