<p><strong>ಪ್ರಧಾನಿಗೆ ದೂರು ಅತೃಪ್ತರ ತೀರ್ಮಾನ</strong></p>.<p><strong>ಬೆಂಗಳೂರು, ಜೂನ್ 7– </strong>ರಾಜ್ಯ ಜನತಾ ದಳದ ಕೆಲವು ‘ಭಿನ್ನಮತೀಯ’ ಶಾಸಕರು ಜೆ.ಎಚ್.ಪಟೇಲ್ ನೇತೃತ್ವದ ಸಂಪುಟ ರಚನೆ ಹಂತದಲ್ಲಿ ತಮಗಾಗಿರುವ ರಾಜಕೀಯ ಅನ್ಯಾಯಕ್ಕೆ ಪರಿಹಾರ ಕೋರಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ ಭೇಟಿ ಮಾಡಿ ದೂರು ಸಲ್ಲಿಸುವ ತೀರ್ಮಾನಕ್ಕೆ ಬಂದಿದ್ದಾರೆ.</p>.<p>ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಗಜಗಾತ್ರದ ಸಂಪುಟ ಪ್ರಾದೇಶಿಕ ಅಸಮತೋಲನದ ಅಪ್ಪಟ ನಿದರ್ಶನವಾಗಿದೆ. ದಳ ಶಾಸಕಾಂಗ ಪಕ್ಷದ ಪ್ರಾತಿನಿಧಿಕ ಸ್ವರೂಪವೂ ಈ ಸಂಪುಟಕ್ಕೆ ಇಲ್ಲ ಎಂದು ವಾದಿಸಿರುವ ಈ ‘ಭಿನ್ನಮತೀಯರು’ ಒಬ್ಬೊಬ್ಬರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಂಚಿನ ನಿಲುವನ್ನು ಬದಲಾಯಿಸಿದ್ದು, ಇಲ್ಲಿ ಆಗಿರುವ ಅನ್ಯಾಯದತ್ತ ‘ದಿಲ್ಲಿ ದೊರೆಯ’<br />ಗಮನ ಸೆಳೆಯುವ ನಿರ್ಧಾರ ಕೈಗೊಂಡಿದ್ದಾರೆ.</p>.<p>ಭಾವನಾತ್ಮಕ ಉದ್ವೇಗಕ್ಕೆ ಒಳಗಾಗಿ ಅಥವಾ ಸಿಟ್ಟಿನ ಕೈಗೆ ಮನಸ್ಸನ್ನು ಕೊಟ್ಟು ವಿಧಾನ ಸಭೆಯಿಂದ ನಿರ್ಗಮಿಸಿದರೆ ಸರ್ಕಾರಕ್ಕೆ ಅಪಾಯ ತಟ್ಟಬಹುದು. ಸರ್ಕಾರ ಉರುಳಲೂಬಹುದು. ಆದರೆ ತಮ್ಮ ಉದ್ದೇಶ ಸರ್ಕಾರವನ್ನು ಉರುಳಿಸುವುದಲ್ಲ, ಬದಲಿಗೆ ಉಳಿಸುವುದು ಎಂದು ‘ಭಿನ್ನಮತೀಯ’ ಶಾಸಕರೊಬ್ಬರು ಪ್ರಜಾವಾಣಿಗೆ ವಿವರಿಸಿದರು.</p>.<p><strong>ಕಲ್ಬುರ್ಗಿ ವಿ.ವಿ ನಾಮಕರಣ– ಮೂಡದ ಒಮ್ಮತ</strong></p>.<p><strong>ಬೆಂಗಳೂರು, ಜೂನ್ 7– </strong>ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪುನರ್ ನಾಮಕರಣ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ದಲಿತ ಸಂಘಟನೆಗಳು ಹಾಗೂ ಬಸವ ದಳದ ಮುಖಂಡರ ಜತೆಗೆ ಇಂದು ಇಲ್ಲಿ ಪ್ರತ್ಯೇಕವಾಗಿ ನಡೆಸಿದ ಚರ್ಚೆ ಫಲಕಾರಿಯಾಗಿದೆ ಅಂತಿಮ ನಿರ್ಧಾರಕ್ಕೆ ಬರಲು ಆಗಲಿಲ್ಲ.</p>.<p>ಗುಲ್ಬರ್ಗ ಪ್ರದೇಶ ಬಸವೇಶ್ವರರ ಕಾರ್ಯಕ್ಷೇತ್ರವಾಗಿದ್ದುದರಿಂದ ಈ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು ಎಂದು ಬಸವದಳ, ಈ ಪ್ರದೇಶದಲ್ಲಿ ದಲಿತರು, ಹಿಂದುಳಿದವರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಡಾ. ಅಂಬೇಡ್ಕರ್ ಹೆಸರಿಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಹಿಡಿದ ಪಟ್ಟು ಸಡಿಲಿಸಿದ್ದುದರಿಂದ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಧಾನಿಗೆ ದೂರು ಅತೃಪ್ತರ ತೀರ್ಮಾನ</strong></p>.<p><strong>ಬೆಂಗಳೂರು, ಜೂನ್ 7– </strong>ರಾಜ್ಯ ಜನತಾ ದಳದ ಕೆಲವು ‘ಭಿನ್ನಮತೀಯ’ ಶಾಸಕರು ಜೆ.ಎಚ್.ಪಟೇಲ್ ನೇತೃತ್ವದ ಸಂಪುಟ ರಚನೆ ಹಂತದಲ್ಲಿ ತಮಗಾಗಿರುವ ರಾಜಕೀಯ ಅನ್ಯಾಯಕ್ಕೆ ಪರಿಹಾರ ಕೋರಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ ಭೇಟಿ ಮಾಡಿ ದೂರು ಸಲ್ಲಿಸುವ ತೀರ್ಮಾನಕ್ಕೆ ಬಂದಿದ್ದಾರೆ.</p>.<p>ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಗಜಗಾತ್ರದ ಸಂಪುಟ ಪ್ರಾದೇಶಿಕ ಅಸಮತೋಲನದ ಅಪ್ಪಟ ನಿದರ್ಶನವಾಗಿದೆ. ದಳ ಶಾಸಕಾಂಗ ಪಕ್ಷದ ಪ್ರಾತಿನಿಧಿಕ ಸ್ವರೂಪವೂ ಈ ಸಂಪುಟಕ್ಕೆ ಇಲ್ಲ ಎಂದು ವಾದಿಸಿರುವ ಈ ‘ಭಿನ್ನಮತೀಯರು’ ಒಬ್ಬೊಬ್ಬರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುಂಚಿನ ನಿಲುವನ್ನು ಬದಲಾಯಿಸಿದ್ದು, ಇಲ್ಲಿ ಆಗಿರುವ ಅನ್ಯಾಯದತ್ತ ‘ದಿಲ್ಲಿ ದೊರೆಯ’<br />ಗಮನ ಸೆಳೆಯುವ ನಿರ್ಧಾರ ಕೈಗೊಂಡಿದ್ದಾರೆ.</p>.<p>ಭಾವನಾತ್ಮಕ ಉದ್ವೇಗಕ್ಕೆ ಒಳಗಾಗಿ ಅಥವಾ ಸಿಟ್ಟಿನ ಕೈಗೆ ಮನಸ್ಸನ್ನು ಕೊಟ್ಟು ವಿಧಾನ ಸಭೆಯಿಂದ ನಿರ್ಗಮಿಸಿದರೆ ಸರ್ಕಾರಕ್ಕೆ ಅಪಾಯ ತಟ್ಟಬಹುದು. ಸರ್ಕಾರ ಉರುಳಲೂಬಹುದು. ಆದರೆ ತಮ್ಮ ಉದ್ದೇಶ ಸರ್ಕಾರವನ್ನು ಉರುಳಿಸುವುದಲ್ಲ, ಬದಲಿಗೆ ಉಳಿಸುವುದು ಎಂದು ‘ಭಿನ್ನಮತೀಯ’ ಶಾಸಕರೊಬ್ಬರು ಪ್ರಜಾವಾಣಿಗೆ ವಿವರಿಸಿದರು.</p>.<p><strong>ಕಲ್ಬುರ್ಗಿ ವಿ.ವಿ ನಾಮಕರಣ– ಮೂಡದ ಒಮ್ಮತ</strong></p>.<p><strong>ಬೆಂಗಳೂರು, ಜೂನ್ 7– </strong>ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಪುನರ್ ನಾಮಕರಣ ಮಾಡುವ ವಿಚಾರದಲ್ಲಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ದಲಿತ ಸಂಘಟನೆಗಳು ಹಾಗೂ ಬಸವ ದಳದ ಮುಖಂಡರ ಜತೆಗೆ ಇಂದು ಇಲ್ಲಿ ಪ್ರತ್ಯೇಕವಾಗಿ ನಡೆಸಿದ ಚರ್ಚೆ ಫಲಕಾರಿಯಾಗಿದೆ ಅಂತಿಮ ನಿರ್ಧಾರಕ್ಕೆ ಬರಲು ಆಗಲಿಲ್ಲ.</p>.<p>ಗುಲ್ಬರ್ಗ ಪ್ರದೇಶ ಬಸವೇಶ್ವರರ ಕಾರ್ಯಕ್ಷೇತ್ರವಾಗಿದ್ದುದರಿಂದ ಈ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಬೇಕು ಎಂದು ಬಸವದಳ, ಈ ಪ್ರದೇಶದಲ್ಲಿ ದಲಿತರು, ಹಿಂದುಳಿದವರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಡಾ. ಅಂಬೇಡ್ಕರ್ ಹೆಸರಿಡಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಹಿಡಿದ ಪಟ್ಟು ಸಡಿಲಿಸಿದ್ದುದರಿಂದ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>