ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ, ಜೂನ್‌ 6, 1996

Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ವಿಶ್ವಾಸಮತ: ನಿರ್ಣಯ ಮಂಡನೆ

ನವದೆಹಲಿ, ಜೂನ್ 11– ಲೋಕಸಭೆಯ ಮುಂದೆ ಇಂದು ವಿಶ್ವಾಸಮತ ಕೋರಿಕೆ ನಿರ್ಣಯವನ್ನು ಪ್ರಧಾನಿ ಎಚ್‌.ಡಿ. ದೇವೇಗೌಡ ಮಂಡಿಸಿದರು.

ಎರಡು ವರ್ಷಗಳ ಹಿಂದೆ ಈ ಸದನದ ಎಸ್‌ಜೆಪಿ ಸದಸ್ಯರಾಗಿ ಕೊನೆಯ ಸಾಲಿನಲ್ಲಿ ಒಬ್ಬಂಟಿಗರಾಗಿ ಕುಳಿತುಕೊಳ್ಳುತ್ತಿದ್ದ ಅವರನ್ನು, ಬದಲಾದ ರಾಜಕೀಯ ಪರಿಸ್ಥಿತಿಯು ಇಡೀ ಸದನ ಕುತೂಹಲದಿಂದ ನೋಡುವಂತೆ ಮಾಡಿತು.

ಅತೃಪ್ತ ಶಾಸಕರ ದಂಡು ದೆಹಲಿಗೆ

ಬೆಂಗಳೂರು, ಜೂನ್ 11– ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಕಳೆದ ವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ ನಂತರ ಬಂಡಾಯವೆದ್ದಿರುವ ಜನತಾ ದಳದ ಅತೃಪ್ತ ಶಾಸಕರು ಪ್ರಧಾನಿಯನ್ನ ಭೇಟಿ ಮಾಡಲು ಇಂದು ಸಂಜೆ ದೆಹಲಿಗೆ ತೆರಳಿದರು. ಈ ಮಧ್ಯೆ ಹಲವರು ಸಚಿವರೂ ದೆಹಲಿ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT