<h2>ಪಾಕಿಸ್ತಾನದ ಹಟದಿಂದ: ವಿಫಲಗೊಂಡ ಮಾತುಕತೆ</h2>.<p><strong>ನವದೆಹಲಿ, ಜೂನ್ 12–</strong> ಕಾರ್ಗಿಲ್ ವಲಯದಲ್ಲಿ ಉಲ್ಬಣಗೊಂಡಿರುವ ಪ್ರಕ್ಷುಬ್ಧ ಸ್ಥಿತಿಯ ನಿವಾರಣೆಗಾಗಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ತಮ್ಮ ನಿಲುವಿಗೆ ಕಟ್ಟುಬಿದ್ದಿದ್ದರಿಂದ ಅವರಿಬ್ಬರ ನಡುವೆ ಇಂದು ನಡೆದ ಚರ್ಚೆಯು ಯಾವುದೇ ಪ್ರತಿಫಲ ಇಲ್ಲದೆ ಸ್ಥಗಿತಗೊಂಡಿತು.</p>.<p>ಈ ಮಧ್ಯೆ ಭಾರತವು ಅತಿಕ್ರಮಣ<br>ಕಾರರನ್ನು ಸಂಪೂರ್ಣವಾಗಿ ಭಾರತದ ಗಡಿಯಾಚೆ ಅಟ್ಟುವವರೆವಿಗೆ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುವ ದೃಢ ನಿರ್ಧಾರಕ್ಕೆ ಬದ್ಧವಾಗಿದೆ.</p>.<p>ಸೇನಾ ಕಾರ್ಯಚರಣೆ ಸ್ಥಗಿತ ಮತ್ತು ಗಡಿ ನಿಯಂತ್ರಣ ರೇಖೆಯನ್ನು ಮತ್ತೆ ಗುರುತಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಪಾಕಿಸ್ತಾನದ ಕೆಲವು ಬೇಡಿಕೆಗಳನ್ನು ಭಾರತ ತಳ್ಳಿ ಹಾಕಿದೆ.</p>.<h2>ಅತಿಕ್ರಮಣಕಾರರ ಹೊರದಬ್ಬಿದ ಕಾರ್ಯಾಚರಣೆ</h2>.<p><strong>ನವದೆಹಲಿ, ಜೂನ್ 12–</strong> ಬಟಾಲಿಕ್ ವಲಯದಲ್ಲಿನ ಪ್ರಮುಖ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಪಾಕಿಸ್ತಾನಿ ಅತಿಕ್ರಮಣಕಾರರನ್ನು ಯಶಸ್ವಿಯಾಗಿ ಹೊರಗಟ್ಟಲು ನಡೆದ ಗುಂಡಿನ ಚಕಮಕಿಯಲ್ಲಿ 13 ಮಂದಿ ಭಾರತೀಯ ಯೋಧರು ಮತ್ತು 25 ಮಂದಿ ಪಾಕಿಸ್ತಾನಿ ಕಡೆಯವರು ಸತ್ತಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಮತ್ತು ಪ್ಯಾರಾಚೂಟ್ ಕಮಾಂಡೊಗಳು ಶತ್ರುಗಳ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ಅಮೋಲ್ ಕಲಿಯಾ ಮತ್ತು ಇತರ ಹನ್ನೆರಡು ಮಂದಿ ಯೋಧರು ಪ್ರಾಣ ಕಳೆದುಕೊಂಡರು.</p>.<p>ಭೂ ಸೇನಾ ಪಡೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಇಂದು ಪತ್ರಿಕಾಗೋಷ್ಠಿಯಲ್ಲಿ, ನೈರುತ್ಯ ಭಾಗದಲ್ಲಿ ಸುಮಾರು ಏಳು ಗಂಟೆ ಕಾಲ ಹೋರಾಟ ನಡೆದಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಪಾಕಿಸ್ತಾನದ ಹಟದಿಂದ: ವಿಫಲಗೊಂಡ ಮಾತುಕತೆ</h2>.<p><strong>ನವದೆಹಲಿ, ಜೂನ್ 12–</strong> ಕಾರ್ಗಿಲ್ ವಲಯದಲ್ಲಿ ಉಲ್ಬಣಗೊಂಡಿರುವ ಪ್ರಕ್ಷುಬ್ಧ ಸ್ಥಿತಿಯ ನಿವಾರಣೆಗಾಗಿ ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ತಮ್ಮ ನಿಲುವಿಗೆ ಕಟ್ಟುಬಿದ್ದಿದ್ದರಿಂದ ಅವರಿಬ್ಬರ ನಡುವೆ ಇಂದು ನಡೆದ ಚರ್ಚೆಯು ಯಾವುದೇ ಪ್ರತಿಫಲ ಇಲ್ಲದೆ ಸ್ಥಗಿತಗೊಂಡಿತು.</p>.<p>ಈ ಮಧ್ಯೆ ಭಾರತವು ಅತಿಕ್ರಮಣ<br>ಕಾರರನ್ನು ಸಂಪೂರ್ಣವಾಗಿ ಭಾರತದ ಗಡಿಯಾಚೆ ಅಟ್ಟುವವರೆವಿಗೆ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುವ ದೃಢ ನಿರ್ಧಾರಕ್ಕೆ ಬದ್ಧವಾಗಿದೆ.</p>.<p>ಸೇನಾ ಕಾರ್ಯಚರಣೆ ಸ್ಥಗಿತ ಮತ್ತು ಗಡಿ ನಿಯಂತ್ರಣ ರೇಖೆಯನ್ನು ಮತ್ತೆ ಗುರುತಿಸುವ ಕಾರ್ಯವನ್ನು ಕೈಗೊಳ್ಳಬೇಕು ಎಂಬುದು ಸೇರಿದಂತೆ ಪಾಕಿಸ್ತಾನದ ಕೆಲವು ಬೇಡಿಕೆಗಳನ್ನು ಭಾರತ ತಳ್ಳಿ ಹಾಕಿದೆ.</p>.<h2>ಅತಿಕ್ರಮಣಕಾರರ ಹೊರದಬ್ಬಿದ ಕಾರ್ಯಾಚರಣೆ</h2>.<p><strong>ನವದೆಹಲಿ, ಜೂನ್ 12–</strong> ಬಟಾಲಿಕ್ ವಲಯದಲ್ಲಿನ ಪ್ರಮುಖ ಸ್ಥಳಗಳಲ್ಲಿ ಅಡಗಿಕೊಂಡಿದ್ದ ಪಾಕಿಸ್ತಾನಿ ಅತಿಕ್ರಮಣಕಾರರನ್ನು ಯಶಸ್ವಿಯಾಗಿ ಹೊರಗಟ್ಟಲು ನಡೆದ ಗುಂಡಿನ ಚಕಮಕಿಯಲ್ಲಿ 13 ಮಂದಿ ಭಾರತೀಯ ಯೋಧರು ಮತ್ತು 25 ಮಂದಿ ಪಾಕಿಸ್ತಾನಿ ಕಡೆಯವರು ಸತ್ತಿದ್ದಾರೆ.</p>.<p>ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಮತ್ತು ಪ್ಯಾರಾಚೂಟ್ ಕಮಾಂಡೊಗಳು ಶತ್ರುಗಳ ನೆಲೆಯ ಮೇಲೆ ನಡೆಸಿದ ದಾಳಿಯಲ್ಲಿ ಕ್ಯಾಪ್ಟನ್ ಅಮೋಲ್ ಕಲಿಯಾ ಮತ್ತು ಇತರ ಹನ್ನೆರಡು ಮಂದಿ ಯೋಧರು ಪ್ರಾಣ ಕಳೆದುಕೊಂಡರು.</p>.<p>ಭೂ ಸೇನಾ ಪಡೆಯ ವಕ್ತಾರ ಕರ್ನಲ್ ವಿಕ್ರಂ ಸಿಂಗ್ ಇಂದು ಪತ್ರಿಕಾಗೋಷ್ಠಿಯಲ್ಲಿ, ನೈರುತ್ಯ ಭಾಗದಲ್ಲಿ ಸುಮಾರು ಏಳು ಗಂಟೆ ಕಾಲ ಹೋರಾಟ ನಡೆದಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>