ಬೀದರ್, ಜ. 15– ಬಸವಕಲ್ಯಾಣದ ಚಂಡಕಾಪುರ ಸಮೀಪದ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಗೊರಠಾಳ ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟುಕೊಂಡಿದ್ದ ದರೋಡೆಕೋರರು ಮತ್ತು ಪೊಲೀಸರ ಮಧ್ಯೆ ಇಂದು ಮಧ್ಯಾಹ್ನ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ದರೋಡೆಕೋರರು ಮೃತಪಟ್ಟು ಡಿಎಸ್ಪಿ ಮತ್ತು ಇನ್ಸ್ಪೆಕ್ಟರ್ ಸೇರಿದಂತೆ 5 ಜನರಿಗೆ ಗಾಯಗಳಾಗಿವೆ.