ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 13–3–1973

Last Updated 12 ಮಾರ್ಚ್ 2023, 22:43 IST
ಅಕ್ಷರ ಗಾತ್ರ

ಬಿ.ಇ.ಎಲ್‌ ಕಾರ್ಮಿಕರ ಗುಂಪುಗಳಲ್ಲಿ ಘರ್ಷಣೆ: 11 ಮಂದಿಗೆ ಗಾಯ
ಬೆಂಗಳೂರು, ಮಾರ್ಚ್‌ 12–
ನಗರದ ಬಿ.ಇ.ಎಲ್‌. ಕಾರ್ಖಾನೆಯ ಎರಡು ಕಾರ್ಮಿಕ ಸಂಘಗಳ ಸದಸ್ಯರ ಮಧ್ಯೆ ಇಂದು ಎರಡು ಬಾರಿ ಘರ್ಷಣೆ ನಡೆದು ‘ಬಿ.ಇ.ಎಲ್‌ ಕಾರ್ಮಿಕ ಸಂಘ’ದ ಪ್ರಧಾನ ಕಾರ್ಯದರ್ಶಿಯವರೂ ಸೇರಿ 11 ಮಂದಿ ಗಾಯಗೊಂಡರು.

ಘಟನೆಯ ಬಗ್ಗೆ ವಿಧಾನಪರಿಷತ್ತಿನಲ್ಲಿ ಇಂದು ಹೇಳಿಕೆ ನೀಡಿದ ಕೈಗಾರಿಕಾ ಸಚಿವ ಎಸ್‌.ಎಂ. ಕೃಷ್ಣ ಅವರು, ತಲೆಗೆ ಗಾಯವಾಗಿರುವ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರನ್‌ ಎಂಬುವವರನ್ನು ಚಿಕಿತ್ಸೆಗಾಗಿ ಇ.ಎಸ್‌.ಐ ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.

***

ತುರ್ಕಿ ರಾಯಭಾರ ಕಚೇರಿ ಮುಂದೆ ಜನಸಂಘದ ಪ್ರದರ್ಶನ
ನವದೆಹಲಿ, ಮಾರ್ಚ್‌ 12–
ತುರ್ಕಿಯ ರಾಯಭಾರ ಕಚೇರಿ ಮುಂದೆ ಇಂದು ಜನಸಂಘದ ನೂರಾರು ಕಾರ್ಯಕರ್ತರು ಪ್ರದರ್ಶನ ನಡೆಸಿ ಗೀತೆ, ಉಪನಿಷತ್ತುಗಳನ್ನು ತುರ್ಕಿಯಲ್ಲಿ ನಿಷೇಧಿಸಲಾಗಿರುವುದನ್ನು ಪ್ರತಿಭಟಿಸಿದರು. ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸುವ ಘೋಷಣೆಗಳನ್ನು ಪ್ರದರ್ಶನಕಾರರು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT