<p><strong>ಬಿ.ಇ.ಎಲ್ ಕಾರ್ಮಿಕರ ಗುಂಪುಗಳಲ್ಲಿ ಘರ್ಷಣೆ: 11 ಮಂದಿಗೆ ಗಾಯ<br />ಬೆಂಗಳೂರು, ಮಾರ್ಚ್ 12–</strong> ನಗರದ ಬಿ.ಇ.ಎಲ್. ಕಾರ್ಖಾನೆಯ ಎರಡು ಕಾರ್ಮಿಕ ಸಂಘಗಳ ಸದಸ್ಯರ ಮಧ್ಯೆ ಇಂದು ಎರಡು ಬಾರಿ ಘರ್ಷಣೆ ನಡೆದು ‘ಬಿ.ಇ.ಎಲ್ ಕಾರ್ಮಿಕ ಸಂಘ’ದ ಪ್ರಧಾನ ಕಾರ್ಯದರ್ಶಿಯವರೂ ಸೇರಿ 11 ಮಂದಿ ಗಾಯಗೊಂಡರು.</p>.<p>ಘಟನೆಯ ಬಗ್ಗೆ ವಿಧಾನಪರಿಷತ್ತಿನಲ್ಲಿ ಇಂದು ಹೇಳಿಕೆ ನೀಡಿದ ಕೈಗಾರಿಕಾ ಸಚಿವ ಎಸ್.ಎಂ. ಕೃಷ್ಣ ಅವರು, ತಲೆಗೆ ಗಾಯವಾಗಿರುವ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರನ್ ಎಂಬುವವರನ್ನು ಚಿಕಿತ್ಸೆಗಾಗಿ ಇ.ಎಸ್.ಐ ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.</p>.<p>***</p>.<p><strong>ತುರ್ಕಿ ರಾಯಭಾರ ಕಚೇರಿ ಮುಂದೆ ಜನಸಂಘದ ಪ್ರದರ್ಶನ<br />ನವದೆಹಲಿ, ಮಾರ್ಚ್ 12–</strong> ತುರ್ಕಿಯ ರಾಯಭಾರ ಕಚೇರಿ ಮುಂದೆ ಇಂದು ಜನಸಂಘದ ನೂರಾರು ಕಾರ್ಯಕರ್ತರು ಪ್ರದರ್ಶನ ನಡೆಸಿ ಗೀತೆ, ಉಪನಿಷತ್ತುಗಳನ್ನು ತುರ್ಕಿಯಲ್ಲಿ ನಿಷೇಧಿಸಲಾಗಿರುವುದನ್ನು ಪ್ರತಿಭಟಿಸಿದರು. ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸುವ ಘೋಷಣೆಗಳನ್ನು ಪ್ರದರ್ಶನಕಾರರು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿ.ಇ.ಎಲ್ ಕಾರ್ಮಿಕರ ಗುಂಪುಗಳಲ್ಲಿ ಘರ್ಷಣೆ: 11 ಮಂದಿಗೆ ಗಾಯ<br />ಬೆಂಗಳೂರು, ಮಾರ್ಚ್ 12–</strong> ನಗರದ ಬಿ.ಇ.ಎಲ್. ಕಾರ್ಖಾನೆಯ ಎರಡು ಕಾರ್ಮಿಕ ಸಂಘಗಳ ಸದಸ್ಯರ ಮಧ್ಯೆ ಇಂದು ಎರಡು ಬಾರಿ ಘರ್ಷಣೆ ನಡೆದು ‘ಬಿ.ಇ.ಎಲ್ ಕಾರ್ಮಿಕ ಸಂಘ’ದ ಪ್ರಧಾನ ಕಾರ್ಯದರ್ಶಿಯವರೂ ಸೇರಿ 11 ಮಂದಿ ಗಾಯಗೊಂಡರು.</p>.<p>ಘಟನೆಯ ಬಗ್ಗೆ ವಿಧಾನಪರಿಷತ್ತಿನಲ್ಲಿ ಇಂದು ಹೇಳಿಕೆ ನೀಡಿದ ಕೈಗಾರಿಕಾ ಸಚಿವ ಎಸ್.ಎಂ. ಕೃಷ್ಣ ಅವರು, ತಲೆಗೆ ಗಾಯವಾಗಿರುವ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರನ್ ಎಂಬುವವರನ್ನು ಚಿಕಿತ್ಸೆಗಾಗಿ ಇ.ಎಸ್.ಐ ಆಸ್ಪತ್ರೆಗೆ ಸೇರಿಸಲಾಗಿದೆ ಎಂದರು.</p>.<p>***</p>.<p><strong>ತುರ್ಕಿ ರಾಯಭಾರ ಕಚೇರಿ ಮುಂದೆ ಜನಸಂಘದ ಪ್ರದರ್ಶನ<br />ನವದೆಹಲಿ, ಮಾರ್ಚ್ 12–</strong> ತುರ್ಕಿಯ ರಾಯಭಾರ ಕಚೇರಿ ಮುಂದೆ ಇಂದು ಜನಸಂಘದ ನೂರಾರು ಕಾರ್ಯಕರ್ತರು ಪ್ರದರ್ಶನ ನಡೆಸಿ ಗೀತೆ, ಉಪನಿಷತ್ತುಗಳನ್ನು ತುರ್ಕಿಯಲ್ಲಿ ನಿಷೇಧಿಸಲಾಗಿರುವುದನ್ನು ಪ್ರತಿಭಟಿಸಿದರು. ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸುವ ಘೋಷಣೆಗಳನ್ನು ಪ್ರದರ್ಶನಕಾರರು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>