<p><strong>ಕಾವೇರಿ: ರಾಜ್ಯದ ಹಕ್ಕು ರಕ್ಷಿಸಲು ಪಂಚಾಯಿತಿಗೆ ಹೋಗಲು ಒತ್ತಾಯ</strong><br /><strong>ಬೆಂಗಳೂರು, ಮಾರ್ಚ್ 12–</strong> ಕಾವೇರಿ ನೀರಿನಲ್ಲಿ ಮೈಸೂರು ರಾಜ್ಯದ ಹಕ್ಕನ್ನು ರಕ್ಷಿಸಲು ತತ್ಕ್ಷಣ ಪಂಚಾಯಿತಿಗೆ ಹೋಗಬೇಕೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಒತ್ತಾಯ ಸಲ್ಲಿಸಿದರು.</p>.<p>ಕೇಂದ್ರ ಮಂತ್ರಿ ಡಾ. ಕೆ.ಎಲ್.ರಾವ್ ಅವರು ಸಂಸತ್ತಿನಲ್ಲಿ ಮೈಸೂರು, ಹೇಮಾವತಿ ಮೊದಲಾದ ಯೋಜನೆಗಳನ್ನು ತತ್ಕ್ಷಣ ನಿಲ್ಲಿಸಬೇಕೆಂದು ಸಲಹೆ ಮಾಡಿದುದರ ಬಗ್ಗೆ ಎರಡೂವರೆ ಗಂಟೆಗಳ ವಿಶೇಷ ಸೂಚನೆಯನ್ನು ಹಲವು ಸದಸ್ಯರು ಮಂಡಿಸಿದರು. ಡಾ. ರಾವ್ ಮತ್ತು ಕೇಂದ್ರ ಸರ್ಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದರು.</p>.<p><strong>‘ಭಾಷಾ ಆಧಾರದ ಮೇಲೆ ಗಡಿಗಳ ಪುನರ್ರಚನೆಯಿಂದ ಅನಾಹುತ’</strong><br /><strong>ಬೆಂಗಳೂರು, ಮಾರ್ಚ್ 12–</strong> ರಾಜ್ಯಗಳ ಗಡಿಯನ್ನು ಭಾಷಾ ಆಧಾರದ ಮೇಲೆ ಪುನರ್ರಚಿಸುವುದು ತೀವ್ರ ಅನಾಹುತಕ್ಕೆ ಎಡೆಗೊಡುವುದೆಂದು ರಾಜ್ಯದ ನಾಲ್ಕು ಮಂದಿ ಹಿರಿಯರು ಎಚ್ಚರಿಕೆ ನೀಡಿದ್ದಾರೆ.</p>.<p>ಮೈಸೂರಿನ ಮಾಜಿ ದಿವಾನರಾದ ಶ್ರೀ ಎನ್. ಮಾಧವರಾವ್, ಶ್ರೀ ಸಿ.ಎಸ್.ವೆಂಕಟಾಚಾರ್, ಡಾ. ಡಿ.ವಿ. ಗುಂಡಪ್ಪ ಮತ್ತು ಪಿ.ಕೋದಂಡರಾವ್ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ: ರಾಜ್ಯದ ಹಕ್ಕು ರಕ್ಷಿಸಲು ಪಂಚಾಯಿತಿಗೆ ಹೋಗಲು ಒತ್ತಾಯ</strong><br /><strong>ಬೆಂಗಳೂರು, ಮಾರ್ಚ್ 12–</strong> ಕಾವೇರಿ ನೀರಿನಲ್ಲಿ ಮೈಸೂರು ರಾಜ್ಯದ ಹಕ್ಕನ್ನು ರಕ್ಷಿಸಲು ತತ್ಕ್ಷಣ ಪಂಚಾಯಿತಿಗೆ ಹೋಗಬೇಕೆಂದು ಇಂದು ವಿಧಾನಸಭೆಯಲ್ಲಿ ಸದಸ್ಯರು ಒತ್ತಾಯ ಸಲ್ಲಿಸಿದರು.</p>.<p>ಕೇಂದ್ರ ಮಂತ್ರಿ ಡಾ. ಕೆ.ಎಲ್.ರಾವ್ ಅವರು ಸಂಸತ್ತಿನಲ್ಲಿ ಮೈಸೂರು, ಹೇಮಾವತಿ ಮೊದಲಾದ ಯೋಜನೆಗಳನ್ನು ತತ್ಕ್ಷಣ ನಿಲ್ಲಿಸಬೇಕೆಂದು ಸಲಹೆ ಮಾಡಿದುದರ ಬಗ್ಗೆ ಎರಡೂವರೆ ಗಂಟೆಗಳ ವಿಶೇಷ ಸೂಚನೆಯನ್ನು ಹಲವು ಸದಸ್ಯರು ಮಂಡಿಸಿದರು. ಡಾ. ರಾವ್ ಮತ್ತು ಕೇಂದ್ರ ಸರ್ಕಾರದ ವರ್ತನೆಯನ್ನು ಕಟುವಾಗಿ ಟೀಕಿಸಿದರು.</p>.<p><strong>‘ಭಾಷಾ ಆಧಾರದ ಮೇಲೆ ಗಡಿಗಳ ಪುನರ್ರಚನೆಯಿಂದ ಅನಾಹುತ’</strong><br /><strong>ಬೆಂಗಳೂರು, ಮಾರ್ಚ್ 12–</strong> ರಾಜ್ಯಗಳ ಗಡಿಯನ್ನು ಭಾಷಾ ಆಧಾರದ ಮೇಲೆ ಪುನರ್ರಚಿಸುವುದು ತೀವ್ರ ಅನಾಹುತಕ್ಕೆ ಎಡೆಗೊಡುವುದೆಂದು ರಾಜ್ಯದ ನಾಲ್ಕು ಮಂದಿ ಹಿರಿಯರು ಎಚ್ಚರಿಕೆ ನೀಡಿದ್ದಾರೆ.</p>.<p>ಮೈಸೂರಿನ ಮಾಜಿ ದಿವಾನರಾದ ಶ್ರೀ ಎನ್. ಮಾಧವರಾವ್, ಶ್ರೀ ಸಿ.ಎಸ್.ವೆಂಕಟಾಚಾರ್, ಡಾ. ಡಿ.ವಿ. ಗುಂಡಪ್ಪ ಮತ್ತು ಪಿ.ಕೋದಂಡರಾವ್ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>