ಮಹಾಜನ್ ವರದಿಗೇ ಕೇಂದ್ರವನ್ನು ಒಪ್ಪಿಸಿ: ರಾಜ್ಯ ಸರ್ಕಾರಕ್ಕೆ ಆಗ್ರಹ
ಬೆಂಗಳೂರು, ಮೇ 3– ಮಹಾಜನ್ ತೀರ್ಪನ್ನು ಬದಿಗೊತ್ತುವ ಪ್ರಯತ್ನಕ್ಕೆ ಬಲಿ ಬೀಳದೆ ಕೇಂದ್ರ ಸರ್ಕಾರ ತೀರ್ಪನ್ನು ಪೂರ್ಣವಾಗಿ ಒಪ್ಪಿಕೊಳ್ಳುವಂತೆ ಪ್ರಯತ್ನ ಮಾಡಬೇಕೆಂದು ಪ್ರದೇಶ ಕಾಂಗ್ರೆಸ್ಸಿನ (ಸಂಸ್ಥಾ) ಕಾರ್ಯ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದೆ.
ಬೆಳಗಾವಿ ವಿಭಜನೆ: ಕೇಂದ್ರದ ಯತ್ನ ಬಗ್ಗೆ ಜನರ ದಿಗ್ಭ್ರಾಂತಿ
ಬೆಳಗಾವಿ, ಮೇ 3– ಬೆಳಗಾವಿ ನಗರದ ವಿಭಜನೆಗೆ ಕೇಂದ್ರ ನಡೆಸಿದೆ ಎನ್ನಲಾದ ಯತ್ನದ ವರದಿ ಇಲ್ಲಿಯ ಎಲ್ಲ ವರ್ಗಗಳ ಜನರಿಗೂ ದಿಗ್ಭ್ರಾಂತಿಯನ್ನುಂಟುಮಾಡಿದೆ.
ಮಹಾರಾಷ್ಟ್ರ ಪರ ಅಥವಾ ಕರ್ನಾಟಕ ಪರ ವಾದಿಗಳಾಗಲಿ, ಬೆಳಗಾವಿ ವಿಭಜನೆಗೆ ಒಪ್ಪುವ ಹಾಗಿಲ್ಲ. ನಗರ ಸಮಗ್ರವಾಗಿರಬೇಕೆಂಬುದೇ ಎರಡೂ ಗುಂಪುಗಳ ಆಶಯ.