ಅವಶ್ಯವಾದರೆ ಅಕ್ಕಿ, ದ್ವಿದಳ ಧಾನ್ಯ, ಗೋಧಿ ಆಮದು: ಚವಾಣ್
ನವದೆಹಲಿ, ನ. 14– ಜನತೆಗೆ ಸರಿಯಾಗಿ ಸರಬರಾಜು ಮಾಡುವುದಕ್ಕಾಗಿ ಅವಶ್ಯವಾದರೆ ಅಕ್ಕಿ, ದ್ವಿದಳ ಧಾನ್ಯ ಮತ್ತು ಗೋಧಿಯನ್ನು ಆಮದು ಮಾಡಿಕೊಂಡುಬೆಲೆ ಮಟ್ಟವನ್ನು ಕಾಪಾಡುವ ದೃಢಸಂಕಲ್ಪವನ್ನು ಹಣಕಾಸು ಸಚಿವ ವೈ.ಬಿ. ಚವಾಣ್ ವ್ಯಕ್ತಪಡಿಸಿದ ನಂತರ, ಲೋಕಸಭೆ ಇಂದು ಸದ್ಯದ ಬೆಲೆ ಏರಿಕೆಗಾಗಿ ಸರ್ಕಾರವನ್ನು ಖಂಡಿಸಲು ವಿರೋಧ ಪಕ್ಷಗಳು ಮಂಡಿಸಿದ್ದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿತು.