ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ, 24–12–1970

Last Updated 23 ಡಿಸೆಂಬರ್ 2020, 20:49 IST
ಅಕ್ಷರ ಗಾತ್ರ

ಧರಣಿ–ಪ್ರತಿಧರಣಿಗಳಿಂದ ವಿಧಾನಸಭೆಯ ಕಲಾಪ ಭಂಗ
ಬೆಂಗಳೂರು, ಡಿ. 23:
ಸಂಸತ್‌ನಲ್ಲಿ ಮಹಾಜನ್‌ ವರದಿಯ ಮಂಡನೆಯಿಂದ ಉಂಟಾದ ಪರಿಸ್ಥಿತಿಯ ಪರಿಶೀಲನೆಗೆ ಸಮಾವೇಶಗೊಂಡ ಮೈಸೂರು ವಿಧಾನಸಭೆಯ ತುರ್ತು ಅಧಿವೇಶನವು, ಧರಣಿ–ಪ್ರತಿಧರಣಿಗಳ ರಂಗವಾಗಿ, ಕಲಾಪಗಳನ್ನು ನಡೆಸದೆ ಗೊಂದಲದಲ್ಲಿಯೇ ನಾಳೆಗೆಂದು ಎದ್ದಿತು.‌

‘ಕೇಂದ್ರ ಸರ್ಕಾರ ಮಾಡಿದ್ದು ಸರಿ; ತುರ್ತು ಅಧಿವೇಶನ ಅನಗತ್ಯ’ ಎಂದು ವಾದಿಸಿದ ನಾಲ್ಕು ಮಂದಿಯ ಮಹಾರಾಷ್ಟ್ರ ಏಕೀಕರಣ ಸದಸ್ಯರ ಧರಣಿಯು, ಅವರ ವಿರುದ್ಧ ಸಭೆಯ ಹಲವು ಕಡೆಗಳಿಂದ ಆಕ್ರೋಶದ ಕೂಗುಗಳನ್ನು ತಂದಿತು.

ರೈಲಿನ ಬೋಗಿಗಳಿಗೆ ಬೆಂಕಿ ಸ್ಲೀಪರ್‌ ಕೋಚ್‌ ಭಸ್ಮ
ಹುಬ್ಬಳ್ಳಿ, ಡಿ. 23:
ಮಹಾಜನ್‌ ವರದಿಯನ್ನು ಸಂಸತ್‌ನಲ್ಲಿ ಮಂಡಿಸಿದ ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟಿಸಲು ಇಂದು ಹಾವೇರಿ ರೈಲು ನಿಲ್ದಾಣದಲ್ಲಿ 5 ಸಾವಿರ ಉದ್ರಿಕ್ತ ಪ್ರದರ್ಶನಕಾರರು ಪುಣೆ– ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದರು. ಈ ಪೈಕಿ ಒಂದು ಸ್ಲೀಪರ್‌ ಕೋಚ್‌ ಭಸ್ಮವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT