<p><strong>ಧರಣಿ–ಪ್ರತಿಧರಣಿಗಳಿಂದ ವಿಧಾನಸಭೆಯ ಕಲಾಪ ಭಂಗ<br />ಬೆಂಗಳೂರು, ಡಿ. 23: </strong>ಸಂಸತ್ನಲ್ಲಿ ಮಹಾಜನ್ ವರದಿಯ ಮಂಡನೆಯಿಂದ ಉಂಟಾದ ಪರಿಸ್ಥಿತಿಯ ಪರಿಶೀಲನೆಗೆ ಸಮಾವೇಶಗೊಂಡ ಮೈಸೂರು ವಿಧಾನಸಭೆಯ ತುರ್ತು ಅಧಿವೇಶನವು, ಧರಣಿ–ಪ್ರತಿಧರಣಿಗಳ ರಂಗವಾಗಿ, ಕಲಾಪಗಳನ್ನು ನಡೆಸದೆ ಗೊಂದಲದಲ್ಲಿಯೇ ನಾಳೆಗೆಂದು ಎದ್ದಿತು.</p>.<p>‘ಕೇಂದ್ರ ಸರ್ಕಾರ ಮಾಡಿದ್ದು ಸರಿ; ತುರ್ತು ಅಧಿವೇಶನ ಅನಗತ್ಯ’ ಎಂದು ವಾದಿಸಿದ ನಾಲ್ಕು ಮಂದಿಯ ಮಹಾರಾಷ್ಟ್ರ ಏಕೀಕರಣ ಸದಸ್ಯರ ಧರಣಿಯು, ಅವರ ವಿರುದ್ಧ ಸಭೆಯ ಹಲವು ಕಡೆಗಳಿಂದ ಆಕ್ರೋಶದ ಕೂಗುಗಳನ್ನು ತಂದಿತು.</p>.<p><strong>ರೈಲಿನ ಬೋಗಿಗಳಿಗೆ ಬೆಂಕಿ ಸ್ಲೀಪರ್ ಕೋಚ್ ಭಸ್ಮ<br />ಹುಬ್ಬಳ್ಳಿ, ಡಿ. 23: </strong>ಮಹಾಜನ್ ವರದಿಯನ್ನು ಸಂಸತ್ನಲ್ಲಿ ಮಂಡಿಸಿದ ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟಿಸಲು ಇಂದು ಹಾವೇರಿ ರೈಲು ನಿಲ್ದಾಣದಲ್ಲಿ 5 ಸಾವಿರ ಉದ್ರಿಕ್ತ ಪ್ರದರ್ಶನಕಾರರು ಪುಣೆ– ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದರು. ಈ ಪೈಕಿ ಒಂದು ಸ್ಲೀಪರ್ ಕೋಚ್ ಭಸ್ಮವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧರಣಿ–ಪ್ರತಿಧರಣಿಗಳಿಂದ ವಿಧಾನಸಭೆಯ ಕಲಾಪ ಭಂಗ<br />ಬೆಂಗಳೂರು, ಡಿ. 23: </strong>ಸಂಸತ್ನಲ್ಲಿ ಮಹಾಜನ್ ವರದಿಯ ಮಂಡನೆಯಿಂದ ಉಂಟಾದ ಪರಿಸ್ಥಿತಿಯ ಪರಿಶೀಲನೆಗೆ ಸಮಾವೇಶಗೊಂಡ ಮೈಸೂರು ವಿಧಾನಸಭೆಯ ತುರ್ತು ಅಧಿವೇಶನವು, ಧರಣಿ–ಪ್ರತಿಧರಣಿಗಳ ರಂಗವಾಗಿ, ಕಲಾಪಗಳನ್ನು ನಡೆಸದೆ ಗೊಂದಲದಲ್ಲಿಯೇ ನಾಳೆಗೆಂದು ಎದ್ದಿತು.</p>.<p>‘ಕೇಂದ್ರ ಸರ್ಕಾರ ಮಾಡಿದ್ದು ಸರಿ; ತುರ್ತು ಅಧಿವೇಶನ ಅನಗತ್ಯ’ ಎಂದು ವಾದಿಸಿದ ನಾಲ್ಕು ಮಂದಿಯ ಮಹಾರಾಷ್ಟ್ರ ಏಕೀಕರಣ ಸದಸ್ಯರ ಧರಣಿಯು, ಅವರ ವಿರುದ್ಧ ಸಭೆಯ ಹಲವು ಕಡೆಗಳಿಂದ ಆಕ್ರೋಶದ ಕೂಗುಗಳನ್ನು ತಂದಿತು.</p>.<p><strong>ರೈಲಿನ ಬೋಗಿಗಳಿಗೆ ಬೆಂಕಿ ಸ್ಲೀಪರ್ ಕೋಚ್ ಭಸ್ಮ<br />ಹುಬ್ಬಳ್ಳಿ, ಡಿ. 23: </strong>ಮಹಾಜನ್ ವರದಿಯನ್ನು ಸಂಸತ್ನಲ್ಲಿ ಮಂಡಿಸಿದ ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟಿಸಲು ಇಂದು ಹಾವೇರಿ ರೈಲು ನಿಲ್ದಾಣದಲ್ಲಿ 5 ಸಾವಿರ ಉದ್ರಿಕ್ತ ಪ್ರದರ್ಶನಕಾರರು ಪುಣೆ– ಬೆಂಗಳೂರು ಎಕ್ಸ್ಪ್ರೆಸ್ ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದರು. ಈ ಪೈಕಿ ಒಂದು ಸ್ಲೀಪರ್ ಕೋಚ್ ಭಸ್ಮವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>