ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೊರಿಸಲು ಕೆಲವರ ಸನ್ನಾಹ: ಮುಖ್ಯಮಂತ್ರಿ ತೀವ್ರ ಆಪಾದನೆ
ಬೆಂಗಳೂರು, ಡಿ. 24– ಶಾಂತಿ ಮತ್ತು ಶಿಸ್ತುಪಾಲನೆ ವ್ಯವಸ್ಥೆ ಕುಸಿದಿದೆ ಎಂಬ ಕಾರಣ ಹುಟ್ಟಿಸಿ, ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಸನ್ನಾಹ ಕೆಲವು ವಲಯಗಳಿಂದ ನಡೆದಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯ ತುರ್ತು ಅಧಿವೇಶನದಲ್ಲಿ ತಿಳಿಸಿದರು.