<p><strong>ಸಾಹಿತ್ಯ ಪರಿಷತ್ ಲಾಂಛನ<br />ಬೆಂಗಳೂರು, ಡಿ. 24–</strong> ಸುಮಾರು ಆರು ದಶಕಗಳ ಕಾಲ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ ಲಾಂಛನವನ್ನು ಹೊಂದುತ್ತಿದೆ. ಹಿರಿಯ ಸಾಹಿತಿ ಶ್ರೀ ವೀ.ಸೀ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಲಾಂಛನ ಸಮಿತಿಯು ಆಯ್ಕೆ ಮಾಡಿದ ಈ ಲಾಂಛನವನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆ ಅಂಗೀಕರಿಸಿವೆ.</p>.<p>ಇಪ್ಪತ್ತು ಕಲಾವಿದರಿಂದ ಬಂದಿದ್ದ ಲಾಂಛನದ ನಮೂನೆಗಳಲ್ಲಿ ಎಚ್.ಎಸ್.ಇನಾಮತಿ ಅವರ ಕೃತಿಯನ್ನು ಸಮಿತಿಯು ಆಯ್ಕೆ ಮಾಡಿತು. ಇನ್ನು ಮುಂದೆ ಪರಿಷತ್ತಿನ ಎಲ್ಲ ಕಾರ್ಯಗಳಲ್ಲಿ ಹಾಗೂ ಪ್ರಕಟನ ವಿಭಾಗದಲ್ಲಿ ಈ ಲಾಂಛನ ಬಳಕೆಯಾಗಲಿದೆ.</p>.<p><strong>ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೊರಿಸಲು ಕೆಲವರ ಸನ್ನಾಹ: ಮುಖ್ಯಮಂತ್ರಿ ತೀವ್ರ ಆಪಾದನೆ<br />ಬೆಂಗಳೂರು, ಡಿ. 24–</strong> ಶಾಂತಿ ಮತ್ತು ಶಿಸ್ತುಪಾಲನೆ ವ್ಯವಸ್ಥೆ ಕುಸಿದಿದೆ ಎಂಬ ಕಾರಣ ಹುಟ್ಟಿಸಿ, ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಸನ್ನಾಹ ಕೆಲವು ವಲಯಗಳಿಂದ ನಡೆದಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯ ತುರ್ತು ಅಧಿವೇಶನದಲ್ಲಿ ತಿಳಿಸಿದರು.</p>.<p>‘ಗಡಿ ಸಮಸ್ಯೆಯ ಸಂಬಂಧದಲ್ಲಿ ನಾನು ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಿದರೆ ಕರ್ತವ್ಯದಿಂದ ತಪ್ಪಿಸಿ ಕೊಂಡಂತಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಹಿತ್ಯ ಪರಿಷತ್ ಲಾಂಛನ<br />ಬೆಂಗಳೂರು, ಡಿ. 24–</strong> ಸುಮಾರು ಆರು ದಶಕಗಳ ಕಾಲ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ ಲಾಂಛನವನ್ನು ಹೊಂದುತ್ತಿದೆ. ಹಿರಿಯ ಸಾಹಿತಿ ಶ್ರೀ ವೀ.ಸೀ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಲಾಂಛನ ಸಮಿತಿಯು ಆಯ್ಕೆ ಮಾಡಿದ ಈ ಲಾಂಛನವನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆ ಅಂಗೀಕರಿಸಿವೆ.</p>.<p>ಇಪ್ಪತ್ತು ಕಲಾವಿದರಿಂದ ಬಂದಿದ್ದ ಲಾಂಛನದ ನಮೂನೆಗಳಲ್ಲಿ ಎಚ್.ಎಸ್.ಇನಾಮತಿ ಅವರ ಕೃತಿಯನ್ನು ಸಮಿತಿಯು ಆಯ್ಕೆ ಮಾಡಿತು. ಇನ್ನು ಮುಂದೆ ಪರಿಷತ್ತಿನ ಎಲ್ಲ ಕಾರ್ಯಗಳಲ್ಲಿ ಹಾಗೂ ಪ್ರಕಟನ ವಿಭಾಗದಲ್ಲಿ ಈ ಲಾಂಛನ ಬಳಕೆಯಾಗಲಿದೆ.</p>.<p><strong>ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೊರಿಸಲು ಕೆಲವರ ಸನ್ನಾಹ: ಮುಖ್ಯಮಂತ್ರಿ ತೀವ್ರ ಆಪಾದನೆ<br />ಬೆಂಗಳೂರು, ಡಿ. 24–</strong> ಶಾಂತಿ ಮತ್ತು ಶಿಸ್ತುಪಾಲನೆ ವ್ಯವಸ್ಥೆ ಕುಸಿದಿದೆ ಎಂಬ ಕಾರಣ ಹುಟ್ಟಿಸಿ, ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಸನ್ನಾಹ ಕೆಲವು ವಲಯಗಳಿಂದ ನಡೆದಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯ ತುರ್ತು ಅಧಿವೇಶನದಲ್ಲಿ ತಿಳಿಸಿದರು.</p>.<p>‘ಗಡಿ ಸಮಸ್ಯೆಯ ಸಂಬಂಧದಲ್ಲಿ ನಾನು ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಿದರೆ ಕರ್ತವ್ಯದಿಂದ ತಪ್ಪಿಸಿ ಕೊಂಡಂತಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>