<p><strong>ಪರಿಹಾರಕ್ಕಾಗಿ ಪಾಕಿಸ್ತಾನಕ್ಕೆ ಆಗ್ರಹ</strong></p>.<p>ನವದೆಹಲಿ, ಫೆ. 3– ಲಾಹೋರಿನಲ್ಲಿ ಭಾರತೀಯ ವಿಮಾನವನ್ನು ಸುಟ್ಟ ಪ್ರಕರಣದಲ್ಲಿ ‘ಪಾಕಿಸ್ತಾನ ಸರ್ಕಾರ ಪ್ರತ್ಯಕ್ಷವಾಗಿ ಭಾಗವಹಿಸಿದೆ’ ಎಂದು ಭಾರತ ಇಂದು ರಾತ್ರಿ ಆಪಾದಿಸಿತು.</p>.<p>ವಿಮಾನ ಅಪಹರಿಸಿ ಅದನ್ನೂ ಅದರಲ್ಲಿದ್ದ ಪ್ರಯಾಣಿಕರ ವಸ್ತುಗಳನ್ನೂ ಸುಟ್ಟಿದ್ದಕ್ಕಾಗಿ ಪರಿಹಾರ ಕೊಡುವಂತೆ ಭಾರತ ಈ ಉಗ್ರ ಒಕ್ಕಣೆಯ ಪತ್ರದಲ್ಲಿ ಆಗ್ರಹ ಮಾಡಿದೆ. ಈ ಆಪಾದನೆಯನ್ನು ಸಮರ್ಥಿಸಲು ಭಾರತ ರುಜುವಾತನ್ನು ಒದಗಿಸುತ್ತದೆ ಎಂದೂ ತನ್ನ ಪ್ರತಿಭಟನಾ ಪತ್ರದಲ್ಲಿ ಅದು ತಿಳಿಸಿದೆ.</p>.<p><strong>ರಾಜ್ಯದಲ್ಲಿ ಚುನಾವಣಾ ಹೊಂದಾಣಿಕೆ ಯತ್ನ ವಿಫಲ</strong></p>.<p>ಬೆಂಗಳೂರು, ಫೆ. 3– ಚುನಾವಣಾ ಹೊಂದಾಣಿಕೆ ಬಗ್ಗೆ ಪಿ.ಎಸ್.ಪಿ. ಮತ್ತು ಇತರ ಪಕ್ಷಗಳ ನಡುವಣ ರಾಜ್ಯ ಮಟ್ಟದ ಸಂಧಾನ ಪ್ರಯತ್ನ ಮುರಿದು ಬಿದ್ದಿದೆ ಎಂದು ಸ್ವತಂತ್ರ ಪಕ್ಷದ ಪ್ರಕಟಣೆಯೊಂದು ತಿಳಿಸಿದೆ.</p>.<p>ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಆದೇಶದಂತೆ, ಸ್ವತಂತ್ರ ಪಕ್ಷವು ಹಾಸನ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು<br />ನಿಲ್ಲಿಸಲು ತೀರ್ಮಾನಿಸಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರಿಹಾರಕ್ಕಾಗಿ ಪಾಕಿಸ್ತಾನಕ್ಕೆ ಆಗ್ರಹ</strong></p>.<p>ನವದೆಹಲಿ, ಫೆ. 3– ಲಾಹೋರಿನಲ್ಲಿ ಭಾರತೀಯ ವಿಮಾನವನ್ನು ಸುಟ್ಟ ಪ್ರಕರಣದಲ್ಲಿ ‘ಪಾಕಿಸ್ತಾನ ಸರ್ಕಾರ ಪ್ರತ್ಯಕ್ಷವಾಗಿ ಭಾಗವಹಿಸಿದೆ’ ಎಂದು ಭಾರತ ಇಂದು ರಾತ್ರಿ ಆಪಾದಿಸಿತು.</p>.<p>ವಿಮಾನ ಅಪಹರಿಸಿ ಅದನ್ನೂ ಅದರಲ್ಲಿದ್ದ ಪ್ರಯಾಣಿಕರ ವಸ್ತುಗಳನ್ನೂ ಸುಟ್ಟಿದ್ದಕ್ಕಾಗಿ ಪರಿಹಾರ ಕೊಡುವಂತೆ ಭಾರತ ಈ ಉಗ್ರ ಒಕ್ಕಣೆಯ ಪತ್ರದಲ್ಲಿ ಆಗ್ರಹ ಮಾಡಿದೆ. ಈ ಆಪಾದನೆಯನ್ನು ಸಮರ್ಥಿಸಲು ಭಾರತ ರುಜುವಾತನ್ನು ಒದಗಿಸುತ್ತದೆ ಎಂದೂ ತನ್ನ ಪ್ರತಿಭಟನಾ ಪತ್ರದಲ್ಲಿ ಅದು ತಿಳಿಸಿದೆ.</p>.<p><strong>ರಾಜ್ಯದಲ್ಲಿ ಚುನಾವಣಾ ಹೊಂದಾಣಿಕೆ ಯತ್ನ ವಿಫಲ</strong></p>.<p>ಬೆಂಗಳೂರು, ಫೆ. 3– ಚುನಾವಣಾ ಹೊಂದಾಣಿಕೆ ಬಗ್ಗೆ ಪಿ.ಎಸ್.ಪಿ. ಮತ್ತು ಇತರ ಪಕ್ಷಗಳ ನಡುವಣ ರಾಜ್ಯ ಮಟ್ಟದ ಸಂಧಾನ ಪ್ರಯತ್ನ ಮುರಿದು ಬಿದ್ದಿದೆ ಎಂದು ಸ್ವತಂತ್ರ ಪಕ್ಷದ ಪ್ರಕಟಣೆಯೊಂದು ತಿಳಿಸಿದೆ.</p>.<p>ಪಕ್ಷದ ಕೇಂದ್ರ ಸಂಸದೀಯ ಮಂಡಳಿಯ ಆದೇಶದಂತೆ, ಸ್ವತಂತ್ರ ಪಕ್ಷವು ಹಾಸನ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನು<br />ನಿಲ್ಲಿಸಲು ತೀರ್ಮಾನಿಸಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿ ಆಯ್ಕೆಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>