ವಿದೇಶಕ್ಕೆ ಕೋಕ ಕೋಲಾ ಕಂಪನಿಯಿಂದ 2 ಕೋಟಿ ರೂ ರವಾನೆ: ರಾಜ್ಯಸಭೆ ಆಕ್ರೋಶ
ನವದೆಹಲಿ, ಮೇ 31– ಕೋಕ ಕೋಲ ತಯಾರಿಸುತ್ತಿರುವ ಕಂಪನಿಯು 1958ರಿಂದ 1969ರವರೆಗಿನ ಅವಧಿಯಲ್ಲಿ ವಿದೇಶಕ್ಕೆ ಎರಡು ಕೋಟಿ ರೂಪಾಯಿಗಳನ್ನು ಸಂದಾಯ ಮಾಡಿದೆ.
ಕಂಪನಿಯು ಸರ್ಕಾರದಿಂದ ಕೆಲವೊಂದು ವಿಶೇಷ ಅನುಗ್ರಹಗಳಿಗೆ ಪಾತ್ರವಾಗಿದೆ ಎಂದು ರಾಜ್ಯಸಭೆಯಲ್ಲಿ ಸಂಶಯ ವ್ಯಕ್ತಪಡಿಸಿದ ಕೆಲವು ಸದಸ್ಯರು, ಒಂದೇ ಸಮನೆ ಆರೋಪಗಳ ಸುರಿಮಳೆ ಕರೆದಿದ್ದರಿಂದ ಉಪ ಪ್ರಶ್ನೆಗಳಿಗೆ ಉತ್ತರ ದೊರೆಯಲಿಲ್ಲ.
ಧರ್ಮವೀರರಿಗೆ ದೆಹಲಿಗೆ ಬುಲಾವ್
ನವದೆಹಲಿ, ಮೇ 31– ಉದಕ ಮಂಡಲದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮೈಸೂರಿನ ರಾಜ್ಯಪಾಲ ಶ್ರೀ ಧರ್ಮವೀರ ಅವರಿಗೆ ದೆಹಲಿಗೆ ಬರಬೇಕೆಂದು ಕೇಂದ್ರ ಸರ್ಕಾರ ಕರೆ ಇತ್ತಿದೆ. ಅವರು ನಾಳೆ ಇಲ್ಲಿಗೆ ಬರುವ ನಿರೀಕ್ಷೆ ಇದೆ.
ಮೈಸೂರಿನಿಂದ ಆಯ್ಕೆಯಾಗಿರುವ ಆಡಳಿತ ಕಾಂಗ್ರೆಸ್ಸಿನ ಸಂಸತ್ ಸದಸ್ಯರು ರಾಜ್ಯಪಾಲರ ಆಡಳಿತದ ವಿರುದ್ಧ ಕೊಟ್ಟಿ ರುವ ದೂರುಗಳಿಗೆ ಸಂಬಂಧಿಸಿದಂತೆ ಧರ್ಮವೀರ ಅವರನ್ನು ದೆಹಲಿಗೆ ಕರೆಸಲಾಗಿದೆಯೆಂದು ಗೊತ್ತಾಗಿದೆ.