ರಾಜ್ಯದ ಎಂಟು ಕಡೆ ಗುಂಡು: 5 ಸಾವು, 13 ಜನಕ್ಕೆ ಪೆಟ್ಟು
ಬೆಂಗಳೂರು, ಅ. 3– ಕಳೆದ ಇಪ್ಪತ್ತು ದಿನಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು 8 ಕಡೆಗಳಲ್ಲಿ ಗೋಲಿಬಾರ್ ಮಾಡಿದ್ದರಿಂದ 5 ಮಂದಿ ಸತ್ತು, 13 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಕಡೆಗಳಲ್ಲಿ ಪೊಲೀಸರು ಬೆದರುಗುಂಡನ್ನು ಹಾರಿಸಿ ಗುಂಪನ್ನು ಚದುರಿಸಿದರು. ಇದಲ್ಲದೆ ಹಲವು ಬಾರಿ ಅಶ್ರುವಾಯು ಹಾಗೂ ಲಾಠಿ ಪ್ರಯೋಗ ಮಾಡಬೇಕಾಯಿತು.
ಹಾಸನದ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನ ಮರಣ ಹಾಗೂ ಬೆಲೆ ಏರಿಕೆ ಮತ್ತು ಆಹಾರ ಅಭಾವದ ಪ್ರಯುಕ್ತ ನಾನಾ ಕಡೆ ಏರ್ಪಡಿಸಲಾಗಿದ್ದ ಮೆರವಣಿಗೆಗಳು ಹಾಗೂ ಪ್ರದರ್ಶನಗಳು ಕಲ್ಲು ತೂರಾಟದಲ್ಲಿ, ಅಂಗಡಿಗಳ ಮತ್ತು ರೈಲ್ವೆ ವಾಗೀನುಗಳ ಲೂಟಿಯಲ್ಲಿ ಪರ್ಯವಸಾನಗೊಂಡಿದ್ದವು.