ಕಾಮನ್ವೆಲ್ತ್ ಪಾರ್ಲಿಮೆಂಟರಿ ಸಂಘದ ರಾಜ್ಯ ಶಾಖೆ ಮತ್ತು ರಾಜ್ಯಾಂಗ ಹಾಗೂ ಸಂಸದೀಯ ಸಂಸ್ಥೆಯ ರಾಜ್ಯ ಶಾಖೆಯ ಆಶ್ರಯದಲ್ಲಿ ವಿಧಾನಸೌಧದಲ್ಲಿ ಶಾಸಕರ ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಡಾ. ಧಿಲೋನ್ ಅವರು, ಸಭೆಯ ಗೌರವ, ಘನತೆ ಎತ್ತಿ ಹಿಡಿಯುವುದು ಪ್ರತಿಯೊಬ್ಬ ಶಾಸಕನ ಕರ್ತವ್ಯವೆಂದು ಹೇಳಿ, ಚುನಾಯಿತ ಪ್ರತಿನಿಧಿ ಬೇರೆಯವರಿಗೆ ಮಾರ್ಗದರ್ಶಕನಾಗಿರಬೇಕೆಂಬ ಅಂಶವನ್ನು ಮರೆಯಬಾರದೆಂದರು.