ಮುಂಬೈ, ಆಗಸ್ಟ್ 6– ರಾಷ್ಟ್ರದಲ್ಲಿ ಈಗ ಉಂಟಾಗಿರುವ ಅಭಾವ ಪರಿಸ್ಥಿತಿಯಿಂದ ಸಂಭವಿಸಬಹುದಾದ ಬಿಕ್ಕಟ್ಟನ್ನು ನಿವಾರಿಸಲು 140 ರಿಂದ 150 ಟನ್ನುಗಳಷ್ಟು ರಾಬಿ ಬೆಳೆ ಹೆಚ್ಚಿಸಲು ಹಿಂದೆಂದೂ ಕೈಗೊಳ್ಳದಂಥ ಭಾರಿ ಆಹಾರೋತ್ಪಾದನೆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ವಿ.ಪಿ. ನಾಯಕ್ ಅವರ ಜತೆ ಎರಡು ಗಂಟೆಗಳ ಮಾತುಕತೆ ನಡೆಸಿದ ಬಳಿಕ ಈ ವಿಷಯವನ್ನು ಕೇಂದ್ರ ಆಹಾರ ಮತ್ತು ಕೃಷಿ ಖಾತೆ ರಾಜ್ಯ ಸಚಿವ ಎ.ಪಿ. ಶಿಂಧೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.