50 ವರ್ಷಗಳ ಹಿಂದೆ| ಭಾನುವಾರ, 03ನೇ ಡಿಸೆಂಬರ್ 1972

ತಾಯ್ನಾಡಿಗೆ ಬಂದ ವೀರಯೋಧರಿಗೆ ಹೂಮಳೆ ಸ್ವಾಗತ
ನವದೆಹಲಿ, ಡಿ. 2– ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆ ಹೊಂದಿ ಇಂದು ಅಮೃತಸರದಿಂದ ದೆಹಲಿ ದಂಡಿಗೆ ಬಂದ 606 ಭಾರತೀಯ ಯುದ್ಧ ಕೈದಿಗಳ ಮೇಲೆ ರೈಲು ನಿಲ್ದಾಣದಲ್ಲಿ ಸಾವಿರಾರು ಜನ ಹೂಮಳೆಗರೆದು ಸ್ವಾಗತ ಕೋರಿದರು.
‘ಭಾರತ್ ಮಾತಾಕಿ ಜೈ’, ‘ಹಿಂದೂಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ವೀರಯೋಧರು ತಮಗೆ ಸಂದ ಭವ್ಯ ಸ್ವಾಗತಕ್ಕೆ ಉತ್ತರವಾಗಿ ಮೊಳಗಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.