<p><strong>ಕರಾವಳಿ ಪ್ರದೇಶದಲ್ಲಿ ನಕ್ಸಲೀಯ ಚಟುವಟಿಕೆ</strong></p>.<p><strong>ನವದೆಹಲಿ, ಮೇ 10–</strong> ಭತ್ತದ ಕಣಜಗಳಾದ ಕರಾವಳಿ ಪ್ರದೇಶಗಳಲ್ಲಿ ಭೂವಿಹೀನರು ಮತ್ತು ಯುವ ಜನಾಂಗದಲ್ಲಿ ನಕ್ಸಲೀಯ ಚಳವಳಿ ಹೆಚ್ಚು ವ್ಯಾಪಕವಾಗುತ್ತಿದೆ.</p>.<p>ಆಂಧ್ರ, ಕೇರಳ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭೂಸಮಸ್ಯೆಗಳು ನಕ್ಸಲೀಯ ಚಳವಳಿಗೆ ಸಂಬಂಧಿಸಿದಂತಿವೆ. ಮೈಸೂರು ರಾಜ್ಯದಲ್ಲಿ ನಕ್ಸಲೀಯರ<br />ಸಮಸ್ಯೆ ಇಲ್ಲ. ಆದರೂ ಕೇರಳದಿಂದ ನಕ್ಸಲೀಯರ ಅತಿಕ್ರಮಣವನ್ನು ತಡೆಯಲು ಕೇರಳ ಗಡಿಯಲ್ಲಿ ಬಲವಾದ ಸಶಸ್ತ್ರ ಪೊಲೀಸ್ ಕಾವಲು ಹಾಕಲಾಗಿದೆ. ಬೆಂಗಳೂರಿನಲ್ಲಿ ಮಾವೊ ಭಿತ್ತಿಪತ್ರಗಳನ್ನು ಅಂಟಿಸಿದ ಪ್ರಕರಣ ಬಿಟ್ಟರೆ ಬೇರಾವ ಮಹತ್ವದ ಘಟನೆಯೂ ಇಲ್ಲ.</p>.<p><strong>ಹಿಂದಿ ಮಾಧ್ಯಮ ವಾರ್ಸಿಟಿಯಿಂದ ಕನ್ನಡದ ಪ್ರಗತಿಗೆ ವಿಪತ್ತು: ವಿರೋ ಧಿಸಲು ಜನತೆಗೆ ಕರೆ</strong></p>.<p><strong>ಮೈಸೂರು, ಮೇ 10–</strong> ಬೆಂಗಳೂರಿನಲ್ಲಿ ಕೇಂದ್ರದ ಹಿಂದಿ ಮಾಧ್ಯಮದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಡೆದಿದೆಯೆಂದು ಹೇಳಲಾಗಿರುವ ಪ್ರಯತ್ನ ಹಿಂದಿಯೇತರರ ಮೇಲೆ ಹಿಂದಿ ಸಾಮ್ರಾಜ್ಯ ಶಾಹಿಯನ್ನು ಹೇರಲು ನಡೆದಿರುವ ಮೋಸದ ಯತ್ನವೆಂದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಡೈರೆಕ್ಟರ್ ಡಾ. ಹಾ.ಮಾ.ನಾಯಕ್ ಅವರು ಇಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾವಳಿ ಪ್ರದೇಶದಲ್ಲಿ ನಕ್ಸಲೀಯ ಚಟುವಟಿಕೆ</strong></p>.<p><strong>ನವದೆಹಲಿ, ಮೇ 10–</strong> ಭತ್ತದ ಕಣಜಗಳಾದ ಕರಾವಳಿ ಪ್ರದೇಶಗಳಲ್ಲಿ ಭೂವಿಹೀನರು ಮತ್ತು ಯುವ ಜನಾಂಗದಲ್ಲಿ ನಕ್ಸಲೀಯ ಚಳವಳಿ ಹೆಚ್ಚು ವ್ಯಾಪಕವಾಗುತ್ತಿದೆ.</p>.<p>ಆಂಧ್ರ, ಕೇರಳ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭೂಸಮಸ್ಯೆಗಳು ನಕ್ಸಲೀಯ ಚಳವಳಿಗೆ ಸಂಬಂಧಿಸಿದಂತಿವೆ. ಮೈಸೂರು ರಾಜ್ಯದಲ್ಲಿ ನಕ್ಸಲೀಯರ<br />ಸಮಸ್ಯೆ ಇಲ್ಲ. ಆದರೂ ಕೇರಳದಿಂದ ನಕ್ಸಲೀಯರ ಅತಿಕ್ರಮಣವನ್ನು ತಡೆಯಲು ಕೇರಳ ಗಡಿಯಲ್ಲಿ ಬಲವಾದ ಸಶಸ್ತ್ರ ಪೊಲೀಸ್ ಕಾವಲು ಹಾಕಲಾಗಿದೆ. ಬೆಂಗಳೂರಿನಲ್ಲಿ ಮಾವೊ ಭಿತ್ತಿಪತ್ರಗಳನ್ನು ಅಂಟಿಸಿದ ಪ್ರಕರಣ ಬಿಟ್ಟರೆ ಬೇರಾವ ಮಹತ್ವದ ಘಟನೆಯೂ ಇಲ್ಲ.</p>.<p><strong>ಹಿಂದಿ ಮಾಧ್ಯಮ ವಾರ್ಸಿಟಿಯಿಂದ ಕನ್ನಡದ ಪ್ರಗತಿಗೆ ವಿಪತ್ತು: ವಿರೋ ಧಿಸಲು ಜನತೆಗೆ ಕರೆ</strong></p>.<p><strong>ಮೈಸೂರು, ಮೇ 10–</strong> ಬೆಂಗಳೂರಿನಲ್ಲಿ ಕೇಂದ್ರದ ಹಿಂದಿ ಮಾಧ್ಯಮದ ವಿಶ್ವವಿದ್ಯಾನಿಲಯ ಸ್ಥಾಪನೆಗೆ ನಡೆದಿದೆಯೆಂದು ಹೇಳಲಾಗಿರುವ ಪ್ರಯತ್ನ ಹಿಂದಿಯೇತರರ ಮೇಲೆ ಹಿಂದಿ ಸಾಮ್ರಾಜ್ಯ ಶಾಹಿಯನ್ನು ಹೇರಲು ನಡೆದಿರುವ ಮೋಸದ ಯತ್ನವೆಂದು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ಡೈರೆಕ್ಟರ್ ಡಾ. ಹಾ.ಮಾ.ನಾಯಕ್ ಅವರು ಇಂದು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>