ನವದೆಹಲಿ, ಡಿ. 9– ಸಭೆಗೆ ಅಪಚಾರವೆಸಗಿದ್ದಕ್ಕಾಗಿ ಛೀಮಾರಿ ಹಾಕಿಸಿಕೊಳ್ಳಲು ಲೋಕಸಭೆಯ ಮುಂದೆ ಇಂದು ಹಿರಿಯ ಸಿವಿಲ್ ಅಧಿಕಾರಿಯೊಬ್ಬರು ಹಾಜರಾದದ್ದು ಭಾರತದ ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ.
ಕಬ್ಬಿಣ ಮತ್ತು ಉಕ್ಕಿನ ಮಾಜಿ ಡೆಪ್ಯುಟಿ ಕಂಟ್ರೋಲರ್ ಶ್ರೀ ಎಸ್.ಸಿ. ಮುಖರ್ಜಿ ಅವರೇ ಛೀಮಾರಿ ಹಾಕಿಸಿಕೊಂಡವರು.
ಶ್ರೀ ಮುಖರ್ಜಿ ಅವರು ಈಗ ಕಲ್ಕತ್ತದ ಜಂಟಿ ಕಾರ್ಖಾನೆ ಸಮಿತಿಯ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿದ್ದಾರೆ.