ನವದೆಹಲಿ, ನ. 24– ‘ರಾಜಧಾನಿಯಲ್ಲಿ ಹಲವು ಮಹಡಿಗಳು, ಸೌಧಗಳು; ಬಡಹಳ್ಳಿಗರ ಮನೆಯಲ್ಲಿ ಒಂದು ದೀಪಕ್ಕೂ ಗತಿ ಇಲ್ಲ. ಇದು ಸಮಾಜವಾದ ಅಲ್ಲ. ಸಮಾಜವಾದವೆಂದರೆ ಕೆಲಮಂದಿಗೆ ಅರಮನೆಗಳಲ್ಲ, ಬಡವರ ಕಷ್ಟದುಃಖಗಳನ್ನು ಹಂಚಿಕೊಳ್ಳುವುದು’.
ಸಂಸತ್ತಿನ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಇಂದು ಸಂಜೆ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಖಾನ್ ಅಬ್ದುಲ್ ಗಫಾರ್ ಖಾನ್ ಮಾಡಿದ ಭಾಷಣದ ತಿರುಳು ಇದು. ಸರ್ಕಾರದ ನಿಲುವಿನಲ್ಲಿ, ಸಮಾಜದ ಸ್ಥಿತಿಗತಿಯಲ್ಲಿ ಮೂಡಿಬಾರದ ಸಮಾಜವಾದ ಖಾಲಿ ಘೋಷಣೆ ಎಂದು ಅವರು ಹೇಳಿದರು.
ಇಂದಿರಾ: 007
ಮದ್ರಾಸ್, ನ. 24– ನವೆಂಬರ್ ಒಂದರಂದು ರಾತ್ರಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ‘ರಾಜಕೀಯ ಕಾರ್ಯಾರ್ಥವಾಗಿ’ ಮದ್ರಾಸಿಗೆ ವಿಮಾನದಲ್ಲಿ ಬಂದಿದ್ದರೆಂದೂ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ. ಕರುಣಾನಿಧಿ ಅವರನ್ನೂ ಕೆಲವು ಮಂದಿ ಕಾಂಗ್ರೆಸ್ಸಿಗರನ್ನೂ ಅವರು ಭೇಟಿ ಮಾಡಿದ್ದರೆಂದೂ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರು ಇಂದು ಆಪಾದಿಸಿದರು.
‘ಈ ಎಲ್ಲ ವಿಷಯವನ್ನೂ ರಹಸ್ಯವಾಗಿ ಇಡಲಾಗಿದೆ. ಇದನ್ನು 007 ರಹಸ್ಯ ಕಾರ್ಯಾಚರಣೆ ಎಂದು ನಾನು ಕರೆಯುತ್ತೇನೆ’ ಎಂದು ವಾರ್ತಾಗೋಷ್ಠಿಯಲ್ಲಿ ನಗುವಿನ ನಡುವೆ ನುಡಿದರು ಶ್ರೀಮತಿ ಸಿನ್ಹ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.