ನವದೆಹಲಿ, ಅ. 13– ಮೈಸೂರಿನ ಮಾಜಿ ಮಹಾರಾಜರ ಮೂರು ಅರಮನೆಗಳನ್ನು ಪರಭಾರೆ ಮಾಡಬಾರದೆಂಬ ಷರತ್ತನ್ನು ತೆಗೆದುಹಾಕುವ ಪ್ರಶ್ನೆ ಬಗ್ಗೆ ಕಾನೂನು ತಜ್ಞರ ಭಿನ್ನಾಭಿಪ್ರಾಯವಿರುವುದರಿಂದ, ಈ ಪ್ರಶ್ನೆಯ ಬಗ್ಗೆ ಅಟಾರ್ನಿ ಜನರಲ್ ನಿರೇನ್ ಡೇ ಅವರ ಅಭಿಪ್ರಾಯ ಕೋರಲಾಗಿದೆಯೆಂದು ಪ್ರಧಾನಿಯವರು ಇಂದು ಗೃಹಖಾತೆಗೆ ಸೇರಿದ ಸಮಾಲೋಚನಾ ಸಮಿತಿಗೆ ತಿಳಿಸಿದರು.