<p><strong>ಪಂಚಾಯ್ತಿಗೆ ಒಪ್ಪಿಸದೇ ವಿವಾದ ಇತ್ಯರ್ಥ ಯತ್ನ: ಕೆ.ಎಲ್. ರಾವ್ ಭರವಸೆ</strong></p>.<p>ನವದೆಹಲಿ, ಜುಲೈ 19– ಕಾವೇರಿ ಜಲ ವಿವಾದದ ಸಂಬಂಧದಲ್ಲಿ ಮೈಸೂರು, ತಮಿಳುನಾಡು ಮತ್ತು ಕೇರಳ ಸರ್ಕಾರಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ನೀರಾವರಿ ಸಚಿವ ಡಾ. ಕೆ.ಎಲ್. ರಾವ್ ಇಂದು ರಾಜ್ಯಸಭೆಗೆ ತಿಳಿಸಿದರು.</p>.<p>ಆದರೆ, ಮೈಸೂರಿನಲ್ಲಿ ಅಣೆಕಟ್ಟುಗಳ ನಿರ್ಮಾಣದಿಂದ ತಗ್ಗು ಪ್ರದೇಶಗಳಲ್ಲಿ ಇರುವವರಿಗೆ ತೊಂದರೆ ಆಗದಂತೆ ಮಾಡುವುದು ಹೇಗೆ ಎಂಬ ಒಂದೇ ಒಂದು ಅಂಶದ ಕುರಿತು ವಿವಾದವಿದೆ ಎಂದು ಅವರು ಎ.ಡಿ. ಮಣಿ ಮತ್ತು ತಿಲ್ಲೈವಿಲ್ಲಾಲನ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>ವಿವಾದವನ್ನು ಪಂಚಾಯ್ತಿಗೆ ಒಪ್ಪಿಸದೇ, ಸಂಬಂಧಿಸಿದ ಎಲ್ಲ ಪಕ್ಷಗಳವರಿಗೂ ಒಪ್ಪಿಗೆಯಾಗುವಂತೆ ನ್ಯಾಯಸಮ್ಮತವಾಗಿ ಇತ್ಯರ್ಥಪಡಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದೂ ಅವರು ಆಶ್ವಾಸನೆ ನೀಡಿದರು.</p>.<p>‘ಕಾವೇರಿ ಬಗ್ಗೆ ತಮಿಳುನಾಡಿನ ಸಿದ್ಧಾಂತ ವಿಶ್ವದ ಇತಿಹಾಸದಲ್ಲೇ ಪ್ರಥಮ’</p>.<p>ಬೆಂಗಳೂರು, ಜುಲೈ 19– ನದಿ ಹುಟ್ಟುವ ಮೇಲಿನ ಪ್ರದೇಶಕ್ಕೆ ನೀರಿನ ಬಳಕೆ ಬಗ್ಗೆ ಯಾವ ಹಕ್ಕೂ ಇಲ್ಲ. ನದಿ ಹರಿಯುವ ಕೆಳ ಪ್ರದೇಶಕ್ಕೇ ಎಲ್ಲಾ ಹಕ್ಕುಗಳೂ ಸಲ್ಲಬೇಕೆಂಬ ತಮಿಳುನಾಡಿನ ‘ಹೊಸ ಸಿದ್ಧಾಂತ’ವನ್ನು ರಾಜ್ಯಪಾಲ ಶ್ರೀ ಧರ್ಮವೀರ ಅವರು ಅಲ್ಲಗಳೆದಿದ್ದಾರೆ.</p>.<p>ಬೆಳಿಗ್ಗೆ ವಿಧಾನಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ‘ಇಂಥ ಸಿದ್ಧಾಂತವನ್ನು ವಿಶ್ವ ಇತಿಹಾಸದಲ್ಲಿ ಎಲ್ಲೂ ಪ್ರತಿಪಾದಿಸಿಲ್ಲ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಂಚಾಯ್ತಿಗೆ ಒಪ್ಪಿಸದೇ ವಿವಾದ ಇತ್ಯರ್ಥ ಯತ್ನ: ಕೆ.ಎಲ್. ರಾವ್ ಭರವಸೆ</strong></p>.<p>ನವದೆಹಲಿ, ಜುಲೈ 19– ಕಾವೇರಿ ಜಲ ವಿವಾದದ ಸಂಬಂಧದಲ್ಲಿ ಮೈಸೂರು, ತಮಿಳುನಾಡು ಮತ್ತು ಕೇರಳ ಸರ್ಕಾರಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ನೀರಾವರಿ ಸಚಿವ ಡಾ. ಕೆ.ಎಲ್. ರಾವ್ ಇಂದು ರಾಜ್ಯಸಭೆಗೆ ತಿಳಿಸಿದರು.</p>.<p>ಆದರೆ, ಮೈಸೂರಿನಲ್ಲಿ ಅಣೆಕಟ್ಟುಗಳ ನಿರ್ಮಾಣದಿಂದ ತಗ್ಗು ಪ್ರದೇಶಗಳಲ್ಲಿ ಇರುವವರಿಗೆ ತೊಂದರೆ ಆಗದಂತೆ ಮಾಡುವುದು ಹೇಗೆ ಎಂಬ ಒಂದೇ ಒಂದು ಅಂಶದ ಕುರಿತು ವಿವಾದವಿದೆ ಎಂದು ಅವರು ಎ.ಡಿ. ಮಣಿ ಮತ್ತು ತಿಲ್ಲೈವಿಲ್ಲಾಲನ್ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.</p>.<p>ವಿವಾದವನ್ನು ಪಂಚಾಯ್ತಿಗೆ ಒಪ್ಪಿಸದೇ, ಸಂಬಂಧಿಸಿದ ಎಲ್ಲ ಪಕ್ಷಗಳವರಿಗೂ ಒಪ್ಪಿಗೆಯಾಗುವಂತೆ ನ್ಯಾಯಸಮ್ಮತವಾಗಿ ಇತ್ಯರ್ಥಪಡಿಸಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದೂ ಅವರು ಆಶ್ವಾಸನೆ ನೀಡಿದರು.</p>.<p>‘ಕಾವೇರಿ ಬಗ್ಗೆ ತಮಿಳುನಾಡಿನ ಸಿದ್ಧಾಂತ ವಿಶ್ವದ ಇತಿಹಾಸದಲ್ಲೇ ಪ್ರಥಮ’</p>.<p>ಬೆಂಗಳೂರು, ಜುಲೈ 19– ನದಿ ಹುಟ್ಟುವ ಮೇಲಿನ ಪ್ರದೇಶಕ್ಕೆ ನೀರಿನ ಬಳಕೆ ಬಗ್ಗೆ ಯಾವ ಹಕ್ಕೂ ಇಲ್ಲ. ನದಿ ಹರಿಯುವ ಕೆಳ ಪ್ರದೇಶಕ್ಕೇ ಎಲ್ಲಾ ಹಕ್ಕುಗಳೂ ಸಲ್ಲಬೇಕೆಂಬ ತಮಿಳುನಾಡಿನ ‘ಹೊಸ ಸಿದ್ಧಾಂತ’ವನ್ನು ರಾಜ್ಯಪಾಲ ಶ್ರೀ ಧರ್ಮವೀರ ಅವರು ಅಲ್ಲಗಳೆದಿದ್ದಾರೆ.</p>.<p>ಬೆಳಿಗ್ಗೆ ವಿಧಾನಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ‘ಇಂಥ ಸಿದ್ಧಾಂತವನ್ನು ವಿಶ್ವ ಇತಿಹಾಸದಲ್ಲಿ ಎಲ್ಲೂ ಪ್ರತಿಪಾದಿಸಿಲ್ಲ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>