ಬೆಲೆ ಕಟ್ಟಲು ಸಾಧ್ಯವಿಲ್ಲದಿರುವಷ್ಟು ಅಮೂಲ್ಯ ವಸ್ತುಗಳಾದರೂ ತಜ್ಞರ ಅಂದಾಜಿನ ಪ್ರಕಾರ, ಸುಮಾರು 15 ಲಕ್ಷ ರೂಪಾಯಿ ಬೆಲೆಬಾಳುವ ಕಲಾ ವಸ್ತುಗಳನ್ನು ದಿವಂಗತ ವೆಂಕಟಪ್ಪನವರ ಸೋದರ ಸಂಬಂಧಿ ಶ್ರೀ ಕೆ.ರಾಮರಾಜು ಅವರು, ಕಬ್ಬನ್ಪಾರ್ಕ್ನಲ್ಲಿ ನಿರ್ಮಾಣವಾಗುತ್ತಿರುವ ‘ವೆಂಕಟಪ್ಪ ಕಲಾ ಮಂಟಪ’ದಲ್ಲಿ ಶಾಶ್ವತವಾಗಿಡಲೆಂದು ಸರ್ಕಾರಕ್ಕೆ ದಾನ ಮಾಡಿದ್ದಾರೆ.