ಹೊಸಪೇಟೆ ಉಕ್ಕು ಕಾರ್ಖಾನೆ: ಆರ್ಥಿಕ– ತಾಂತ್ರಿಕ ಅಧ್ಯಯನ ಆರಂಭ
ನವದೆಹಲಿ, ಫೆ. 27– ವಿಶಾಖಪಟ್ಟಣ, ಹೊಸಪೇಟೆ ಮತ್ತು ಸೇಲಂಗಳಲ್ಲಿ ಆರಂಭವಾಗುವ ಹೊಸ ಉಕ್ಕಿನ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ– ಆರ್ಥಿಕ ಅಧ್ಯಯನ ಕೈಗೊಳ್ಳಲು ಉಕ್ಕು ಮತ್ತು ಭಾರಿ ಎಂಜಿನಿಯರಿಂಗ್ ಸಚಿವ ಶಾಖೆಯು ಇಂದು ಸಲಹಾಗಾರರ ನೇಮಕವನ್ನು ಪ್ರಕಟಿಸಿತು.
ವಿಶಾಖಪಟ್ಟಣ ಮತ್ತು ಸೇಲಂ ಕಾರ್ಖಾನೆ ಕೆಲಸ ಕಾರ್ಯಗಳನ್ನು ಮೆಸರ್ಸ್ ಎಂ.ಎನ್. ದಸ್ತೂರ್ ಮತ್ತು ಕಂಪನಿಗೆ ವಹಿಸಲಾಗಿದೆ.