ಆಡಳಿತ ಕಾಂಗ್ರೆಸ್ ಸಮಿತಿಗಳಿಗೆಲ್ಲ ದೇವರಾಜ ಅರಸು ಅಧ್ಯಕ್ಷತೆ
ನವದೆಹಲಿ, ಜುಲೈ 21– ಆಡಳಿತ ಕಾಂಗ್ರೆಸ್ ಅಧ್ಯಕ್ಷ ದಾಮೋದರಂ ಸಂಜೀವಯ್ಯಅವರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಯನ್ನು ಡಿ. ದೇವರಾಜ ಅರಸು ಅವರಅಧ್ಯಕ್ಷತೆಯಲ್ಲಿ ಪುನರ್ ರಚಿಸಿದ್ದಾರೆ. ಅರಸು ಅವರೇ ಪ್ರದೇಶ ಚುನಾವಣೆ ಸಮಿತಿಯ ಅಧ್ಯಕ್ಷರೂ ಆಗಿರುತ್ತಾರೆ.
ಪ್ರದೇಶ ಕಾಂಗ್ರೆಸಿನ ಕಾರ್ಯಕಾರಿ ಸಮಿತಿ, ಪ್ರದೇಶ ಚುನಾವಣೆ ಸಮಿತಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯ ಹೆಸರುಗಳನ್ನು ಇಂದು ಬಿಡುಗಡೆ ಮಾಡಿದ ಪ್ರಧಾನ ಕಾರ್ಯದರ್ಶಿ ಚಂದ್ರಜಿತ್ ಯಾದವ್ ಅವರು ‘ಇದು ಒಪ್ಪಿಗೆ ಪಡೆದ ಪಟ್ಟಿ’ ಎಂದು ಪತ್ರಕರ್ತರಿಗೆ ತಿಳಿಸಿದರು.
ಪಟ್ಟಿ ಪ್ರಕಟಿಸಿದಾಗ ಹಾಜರಿದ್ದ ಅರಸು ಮತ್ತು ವಿಸರ್ಜಿತ ವಿಧಾನಸಭೆಯಲ್ಲಿ ಪಕ್ಷದ ನಾಯಕರಾಗಿದ್ದ ಎಚ್. ಸಿದ್ದವೀರಪ್ಪ ಅವರು ತಮ್ಮ ಸಂತೋಷ ವ್ಯಕ್ತಪಡಿಸಿದರು.