ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ13–8–1971

Last Updated 12 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ರಾಜ್ಯಸಭೆಯಿಂದ ಹೊರಕ್ಕೆ

ನವದೆಹಲಿ, ಆಗಸ್ಟ್‌ 12– ಸಭೆಯಿಂದ ಹೊರಹೋಗಲು ನಿರಾಕರಿಸಿದ ಎಸ್‌.ಎಸ್‌.ಪಿ.ಯ ರಾಜನಾರಾಯಣ್‌ ಅವರನ್ನು ರಾಜ್ಯಸಭೆಯ ಈ ಅಧಿವೇಶನದ ಉಳಿದ ಅವಧಿಯಿಂದ ಸಸ್ಪೆಂಡ್‌ ಮಾಡಿದ ನಂತರ ಅವರನ್ನು ಬಲಾತ್ಕಾರವಾಗಿ ಹೊರಕ್ಕೆ ಒಯ್ಯಲಾಯಿತು.

ಷೇಖ್‌ ಮುಜೀಬುರ್‌ ರಹಮಾನರ ಬಿಡುಗಡೆ ಕುರಿತ ಗಮನ ಸೆಳೆಯುವ ಸೂಚನೆಯನ್ನು ಸಭೆ ಚರ್ಚಿಸುತ್ತಿದ್ದಾಗ, ಪದೇ ಪದೇ ತಾವು ಮಾಡುತ್ತಿದ್ದ ಕೋರಿಕೆಯನ್ನು ಲೆಕ್ಕಿಸದೆ ರಾಜನಾರಾಯಣ್‌ ಮಾತನಾಡುತ್ತಲೇ ಇದ್ದುದರಿಂದ ಸಭಾಪತಿ ಜಿ.ಎಸ್.ಪಾಠಕ್‌, ಅವರನ್ನು ಹೊರಕ್ಕೆ ಒಯ್ಯುವಂತೆ ಮಾರ್ಷಲ್‌ಗೆ ಆಜ್ಞಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT