ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: 28.4.1972 ಶುಕ್ರವಾರ

Last Updated 27 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕಡಿಮೆ ಭೂ ಹಿಡುವಳಿ ನಿಗದಿ ಮಾಡಲು ರಾಜ್ಯ ಸರ್ಕಾರಗಳು ಸ್ವತಂತ್ರ

ನವದೆಹಲಿ, ಏ.27– ಕೇಂದ್ರ ಭೂಸುಧಾರಣಾ ಸಮಿತಿ ಸಲಹೆ ಮಾಡಿರುವ ಪರಮಾವಧಿ ಮಿತಿಗಿಂತ ಕಡಿಮೆಯಿರುವಂತೆ ರಾಜ್ಯ ಸರ್ಕಾರಗಳು ಭೂಹಿಡುವಳಿ ಮಿತಿಯನ್ನು ನಿಗದಿಗೊಳಿಸಲು ಅಡ್ಡಿಯಿಲ್ಲ ಎಂದು ಕೇಂದ್ರ ಕೃಷಿ ಸಚಿವ ಫಕ್ರುದ್ದೀನ್‌ ಅಲೀ ಅಹ್ಮದ್‌ ಅವರು ಇಂದು ಲೋಕಸಭೆಗೆ ಆಶ್ವಾಸನೆ ನೀಡಿದರು.

ಭೂಹಿಡುವಳಿ ಮಿತಿ ಕುರಿತ ಸಭೆಯಲ್ಲಿ ಹೇಳಿಕೆ ನೀಡುತ್ತಿದ್ದ ಸಚಿವರು, ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಇರುವ ವಾಸ್ತವ ಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಮಿತಿ ನಿಗದಿಗೊಳಿಸಲು ಸಹ ಯಾವ ಅಡ್ಡಿಯೂ ಇಲ್ಲ; ಸಮಿತಿ ಸಲಹೆ ಮಾಡಿದ್ದದ್ದು ಪರಮಾವಧಿ ಮಿತಿಯನ್ನಷ್ಟೇ ಎಂದೂ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT