<p><strong>ಬಾಂಗ್ಲಾ ದೇಶದ ಬಗ್ಗೆ ವಿಶ್ವದ ಗಮನ ಸೆಳೆಯಲು ಸರ್ವ ಯತ್ನ</strong></p>.<p><strong>ನವದೆಹಲಿ, ಜೂನ್ 7– </strong>ಸರ್ಕಾರವು ‘ಪಶ್ಚಿಮ ಪಾಕಿಸ್ತಾನವನ್ನು ಸಂತೈಸುತ್ತಿದೆ’ ಎಂಬ ಆರೋಪವನ್ನು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಲೋಕಸಭೆಯಲ್ಲಿ ಅಲ್ಲಗೆಳೆದರು.</p>.<p>ಪೂರ್ವ ಬಂಗಾಳದ ನಿರಾಶ್ರಿತರಲ್ಲಿ ಕಾಲರಾ ಹಬ್ಬಿರುವ ಬಗೆಗೆ ಬಂದಿದ್ದ ಸೆಳೆಯುವ ಸೂಚನೆ ಸಂಬಂಧದಲ್ಲಿ ಪ್ರದಾನಿ ಮಾತನಾಡಿ, ‘ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ನಾವು ಅವರಿಗೆ (ಪಶ್ಚಿಮ ಪಾಕಿಸ್ತಾನಿಗಳಿಗೆ) ಪ್ರೋತ್ಸಾಹ ಕೊಡುತ್ತಿಲ್ಲ ಎಂದರು.</p>.<p>‘ಅಲ್ಲಿನ ನಿಜವಾದ ಸ್ಥಿತಿಗತಿ ಕಡೆಗೆ ವಿಶ್ವದ ಗಮನ ಸೆಳೆಯುವುದರಲ್ಲಿ ನಾವು ಬಹಳ ಕಾರ್ಯನಿರತರಾಗಿದ್ದೇವೆ’ ಎಂದರವರು.</p>.<p><strong>ಸಮಗ್ರ ಪ್ರದೇಶ ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ತುಂಗಭದ್ರಾ: 1.5 ಕೋಟಿ ರೂಪಾಯಿ ಕೇಂದ್ರ ನೆರವು</strong></p>.<p><strong>ನವದೆಹಲಿ, ಜೂನ್ 7– </strong>ಕೇಂದ್ರ ಸರ್ಕಾರ ರೂಪಿಸಿರುವ ಸಮಗ್ರ ಪ್ರಾದೇಶಿಕ ಅಭಿವೃದ್ದಿ ಯೋಜನೆಯೊಂದನ್ನು ರಾಷ್ಟ್ರದಲ್ಲಿ ಆಯ್ಕೆ ಮಾಡಲ್ಪಟ್ಟ ಹತ್ತು ಭಾರಿ ನೀರಾವರಿ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದೆಂದು ಕೃಷಿ ಸ್ಟೇಟ್ ಸಚಿವ ಷೇರ್ಸಿಂಗ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.</p>.<p>ಈ ಬೃಹತ್ ಯೋಜನೆಗೆ ಆಯ್ಕೆ ಮಾಡಲ್ಪಟ್ಟ ಭಾರಿ ನೀರಾವರಿಯ ಹತ್ತು ಕೇಂದ್ರಗಳಲ್ಲಿ ಮೈಸೂರು ರಾಜ್ಯದ ತುಂಗಭದ್ರಾ ಪ್ರದೇಶವೂ ಒಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಂಗ್ಲಾ ದೇಶದ ಬಗ್ಗೆ ವಿಶ್ವದ ಗಮನ ಸೆಳೆಯಲು ಸರ್ವ ಯತ್ನ</strong></p>.<p><strong>ನವದೆಹಲಿ, ಜೂನ್ 7– </strong>ಸರ್ಕಾರವು ‘ಪಶ್ಚಿಮ ಪಾಕಿಸ್ತಾನವನ್ನು ಸಂತೈಸುತ್ತಿದೆ’ ಎಂಬ ಆರೋಪವನ್ನು ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಇಂದು ಲೋಕಸಭೆಯಲ್ಲಿ ಅಲ್ಲಗೆಳೆದರು.</p>.<p>ಪೂರ್ವ ಬಂಗಾಳದ ನಿರಾಶ್ರಿತರಲ್ಲಿ ಕಾಲರಾ ಹಬ್ಬಿರುವ ಬಗೆಗೆ ಬಂದಿದ್ದ ಸೆಳೆಯುವ ಸೂಚನೆ ಸಂಬಂಧದಲ್ಲಿ ಪ್ರದಾನಿ ಮಾತನಾಡಿ, ‘ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ನಾವು ಅವರಿಗೆ (ಪಶ್ಚಿಮ ಪಾಕಿಸ್ತಾನಿಗಳಿಗೆ) ಪ್ರೋತ್ಸಾಹ ಕೊಡುತ್ತಿಲ್ಲ ಎಂದರು.</p>.<p>‘ಅಲ್ಲಿನ ನಿಜವಾದ ಸ್ಥಿತಿಗತಿ ಕಡೆಗೆ ವಿಶ್ವದ ಗಮನ ಸೆಳೆಯುವುದರಲ್ಲಿ ನಾವು ಬಹಳ ಕಾರ್ಯನಿರತರಾಗಿದ್ದೇವೆ’ ಎಂದರವರು.</p>.<p><strong>ಸಮಗ್ರ ಪ್ರದೇಶ ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ತುಂಗಭದ್ರಾ: 1.5 ಕೋಟಿ ರೂಪಾಯಿ ಕೇಂದ್ರ ನೆರವು</strong></p>.<p><strong>ನವದೆಹಲಿ, ಜೂನ್ 7– </strong>ಕೇಂದ್ರ ಸರ್ಕಾರ ರೂಪಿಸಿರುವ ಸಮಗ್ರ ಪ್ರಾದೇಶಿಕ ಅಭಿವೃದ್ದಿ ಯೋಜನೆಯೊಂದನ್ನು ರಾಷ್ಟ್ರದಲ್ಲಿ ಆಯ್ಕೆ ಮಾಡಲ್ಪಟ್ಟ ಹತ್ತು ಭಾರಿ ನೀರಾವರಿ ಪ್ರದೇಶಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದೆಂದು ಕೃಷಿ ಸ್ಟೇಟ್ ಸಚಿವ ಷೇರ್ಸಿಂಗ್ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.</p>.<p>ಈ ಬೃಹತ್ ಯೋಜನೆಗೆ ಆಯ್ಕೆ ಮಾಡಲ್ಪಟ್ಟ ಭಾರಿ ನೀರಾವರಿಯ ಹತ್ತು ಕೇಂದ್ರಗಳಲ್ಲಿ ಮೈಸೂರು ರಾಜ್ಯದ ತುಂಗಭದ್ರಾ ಪ್ರದೇಶವೂ ಒಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>