ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, ಮಾರ್ಚ್‌ 10, 1973

Last Updated 9 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ತೆಲಂಗಾಣ– ಆಂಧ್ರದ ಇತರ ನಾಯಕರೊಡನೆ ಚರ್ಚೆ ನಂತರ ನಿರ್ಧಾರ
ನವದೆಹಲಿ, ಮಾರ್ಚ್‌ 9–
ಆಂಧ್ರಪ್ರದೇಶದ ವಿಭಜನೆ ಬೇಡಿಕೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತೆಲಂಗಾಣ ಮತ್ತು ಆಂಧ್ರದ ಇತರ ನಾಯಕರ ಜತೆ, ತಾವು ಮಾತುಕತೆ ನಡೆಸುವುದಾಗಿ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಪ್ರತ್ಯೇಕತಾವಾದಿ ಆಂಧ್ರ ನಾಯಕ ಶ್ರೀ ಬಿ.ವಿ.ಸುಬ್ಬಾರೆಡ್ಡಿ ಅವರಿಗೆ ತಿಳಿಸಿದರು.

ತಾವು ಆಶಾಭಾವನೆ ಹೊತ್ತು ಆಂಧ್ರಕ್ಕೆ ಹಿಂತಿರುಗಬಹುದೇ ಎಂದು ಪ್ರಶ್ನಿಸಿದಾಗ ಪ್ರಧಾನಿ ಈ ಉತ್ತರ ನೀಡಿದರೆಂದು ಸುಬ್ಬಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

ಗಂಗಾ–ಕಾವೇರಿ ಸಂಪರ್ಕ ಯೋಜನೆ ವಿವರ–ರಾಜ್ಯಕ್ಕೆ ಅಧಿಕೃತ ತಿಳಿವಳಿಕೆ ಇಲ್ಲ
ಬೆಂಗಳೂರು, ಮಾರ್ಚ್‌ 9–
ಗಂಗಾ ಕಾವೇರಿ ನದಿಗಳ ಸಂಪರ್ಕ ಯೋಜನೆಯ ಬಗ್ಗೆ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಅಧಿಕೃತವಾಗಿ ವಿವರಗಳೇನೂ ಇದುವರೆಗೆ ಬಂದಿಲ್ಲ ಎಂದು ಭಾರಿ ನೀರಾವರಿ ರಾಜ್ಯ ಸಚಿವ ಶ್ರೀ ಎಚ್‌.ಎನ್‌.ನಂಜೇಗೌಡ ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

ಶ್ರೀ ಸಿ.ಬೈರೇಗೌಡ (ವೇಮಗಲ್) ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯೋಜನೆ ಬಗ್ಗೆ ವಿವರಗಳನ್ನು ಕೇಳಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT