ತೆಲಂಗಾಣ– ಆಂಧ್ರದ ಇತರ ನಾಯಕರೊಡನೆ ಚರ್ಚೆ ನಂತರ ನಿರ್ಧಾರ
ನವದೆಹಲಿ, ಮಾರ್ಚ್ 9– ಆಂಧ್ರಪ್ರದೇಶದ ವಿಭಜನೆ ಬೇಡಿಕೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತೆಲಂಗಾಣ ಮತ್ತು ಆಂಧ್ರದ ಇತರ ನಾಯಕರ ಜತೆ, ತಾವು ಮಾತುಕತೆ ನಡೆಸುವುದಾಗಿ ಪ್ರಧಾನಿ ಇಂದಿರಾಗಾಂಧಿ ಅವರು ಇಂದು ಪ್ರತ್ಯೇಕತಾವಾದಿ ಆಂಧ್ರ ನಾಯಕ ಶ್ರೀ ಬಿ.ವಿ.ಸುಬ್ಬಾರೆಡ್ಡಿ ಅವರಿಗೆ ತಿಳಿಸಿದರು.