<p><strong>ಹಾಸ್ಟೆಲ್ ಸಿಮೆಂಟು, ಉಕ್ಕು ತಮ್ಮ ಕಟ್ಟಡ ನಿರ್ಮಾಣಕ್ಕೆ ಬಳಸಿಲ್ಲ: ಎಚ್.ಎಂ.ಸಿ.</strong></p><p><strong>ಬೆಂಗಳೂರು, ಏ. 11–</strong> ‘ಹರಿಜನ ಹಾಸ್ಟೆಲ್ ಗಳಿಗಾಗಿ ಇಟ್ಟಿದ್ದ ಸಿಮೆಂಟ್ ಮತ್ತು ಉಕ್ಕು, ಜಯನಗರದ ತಮ್ಮ ಕಟ್ಟಡದ ನಿರ್ಮಾಣಕ್ಕೆ ವರ್ಗಾವಣೆ ಆಗಿದೆ ಎಂಬ ಆಪಾದನೆ ಆಧಾರ ರಹಿತ’ ಎಂದು ಲೋಕೋಪಯೋಗಿ ಮಂತ್ರಿ ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<p>‘ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳ ಹೇಳಿಕೆಯನ್ನು ನಾನು ಈಗಾಗಲೇ ಸಭೆಯ ಮುಂದೆ ಮಂಡಿಸಿದ್ದೇನೆ. ಅದರಲ್ಲಿ ರಶೀದಿ ನಂಬರುಗಳು, ಪೂರೈಕೆ ದಿನ, ಪೂರೈಕೆದಾರರ ವಿಳಾಸ, ಪ್ರಮಾಣ, ಮೌಲ್ಯ ಹಾಗೂ ಹಣ ಪಾವತಿಯ ವಿವರಗಳಿವೆ’ ಎಂದು ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದರು.</p>.<p><strong>ಲೋಕಸಭೆ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಕೂಗಿದ ಪಿಸ್ತೂಲುಧಾರಿ</strong></p><p><strong>ನವದೆಹಲಿ, ಏ. 11–</strong> ತುಂಬಿದ ಎರಡು ಪಿಸ್ತೂಲುಗಳನ್ನು ಹೊಂದಿದ್ದ ಯುವಕನೊಬ್ಬ ಪ್ರೇಕ್ಷಕರ ಗ್ಯಾಲರಿಗೆ ಇಂದು ಘೋಷಣೆಗಳನ್ನು ಕೂಗುತ್ತಾ ನುಗ್ಗಲು ಯತ್ನಿಸಿದ್ದು, ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.</p>.<p>ಸಶಸ್ತ್ರ ವ್ಯಕ್ತಿಯೊಬ್ಬ ಲೋಕಸಭೆ ಗ್ಯಾಲರಿಗೆ ಪ್ರವೇಶಿಸಲು ಪ್ರಯತ್ನಿಸಿರುವುದು <br>ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲು. ಪ್ರೇಕ್ಷಕರ ಗ್ಯಾಲರಿಯಿಂದ ಹಸ್ತಪ್ರತಿಗಳನ್ನು<br>ಎಸೆದ, ಘೋಷಣೆಗಳನ್ನು ಕೂಗಿದ ಪ್ರಕರಣಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸ್ಟೆಲ್ ಸಿಮೆಂಟು, ಉಕ್ಕು ತಮ್ಮ ಕಟ್ಟಡ ನಿರ್ಮಾಣಕ್ಕೆ ಬಳಸಿಲ್ಲ: ಎಚ್.ಎಂ.ಸಿ.</strong></p><p><strong>ಬೆಂಗಳೂರು, ಏ. 11–</strong> ‘ಹರಿಜನ ಹಾಸ್ಟೆಲ್ ಗಳಿಗಾಗಿ ಇಟ್ಟಿದ್ದ ಸಿಮೆಂಟ್ ಮತ್ತು ಉಕ್ಕು, ಜಯನಗರದ ತಮ್ಮ ಕಟ್ಟಡದ ನಿರ್ಮಾಣಕ್ಕೆ ವರ್ಗಾವಣೆ ಆಗಿದೆ ಎಂಬ ಆಪಾದನೆ ಆಧಾರ ರಹಿತ’ ಎಂದು ಲೋಕೋಪಯೋಗಿ ಮಂತ್ರಿ ಎಚ್.ಎಂ. ಚನ್ನಬಸಪ್ಪ ಅವರು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.</p>.<p>‘ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳ ಹೇಳಿಕೆಯನ್ನು ನಾನು ಈಗಾಗಲೇ ಸಭೆಯ ಮುಂದೆ ಮಂಡಿಸಿದ್ದೇನೆ. ಅದರಲ್ಲಿ ರಶೀದಿ ನಂಬರುಗಳು, ಪೂರೈಕೆ ದಿನ, ಪೂರೈಕೆದಾರರ ವಿಳಾಸ, ಪ್ರಮಾಣ, ಮೌಲ್ಯ ಹಾಗೂ ಹಣ ಪಾವತಿಯ ವಿವರಗಳಿವೆ’ ಎಂದು ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದರು.</p>.<p><strong>ಲೋಕಸಭೆ ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ಕೂಗಿದ ಪಿಸ್ತೂಲುಧಾರಿ</strong></p><p><strong>ನವದೆಹಲಿ, ಏ. 11–</strong> ತುಂಬಿದ ಎರಡು ಪಿಸ್ತೂಲುಗಳನ್ನು ಹೊಂದಿದ್ದ ಯುವಕನೊಬ್ಬ ಪ್ರೇಕ್ಷಕರ ಗ್ಯಾಲರಿಗೆ ಇಂದು ಘೋಷಣೆಗಳನ್ನು ಕೂಗುತ್ತಾ ನುಗ್ಗಲು ಯತ್ನಿಸಿದ್ದು, ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.</p>.<p>ಸಶಸ್ತ್ರ ವ್ಯಕ್ತಿಯೊಬ್ಬ ಲೋಕಸಭೆ ಗ್ಯಾಲರಿಗೆ ಪ್ರವೇಶಿಸಲು ಪ್ರಯತ್ನಿಸಿರುವುದು <br>ಸ್ವಾತಂತ್ರ್ಯೋತ್ತರದಲ್ಲಿ ಇದೇ ಮೊದಲು. ಪ್ರೇಕ್ಷಕರ ಗ್ಯಾಲರಿಯಿಂದ ಹಸ್ತಪ್ರತಿಗಳನ್ನು<br>ಎಸೆದ, ಘೋಷಣೆಗಳನ್ನು ಕೂಗಿದ ಪ್ರಕರಣಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>