ನವದೆಹಲಿ, ಏ.13– ‘ಬಡ ರಾಷ್ಟ್ರದಲ್ಲಿನ ಬಡವನ ಪ್ರಜಾಪ್ರಭುತ್ವ ಹೆಚ್ಚು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬಲ್ಲದು. ಆದ್ದರಿಂದ ಈಗಿರುವ ಚುನಾವಣೆ ನಿಯಮಗಳನ್ನು ಬದಲಾಯಿಸಬೇಕು’ ಎಂದು ಜಯಪ್ರಕಾಶ್ ನಾರಾಯಣ್ ಅವರು ಇಂದು ಕರೆಯಿತ್ತರು.
ಜನತಂತ್ರವಾದಿ ಎರಡು ದಿನಗಳ ಅಖಿಲ ಭಾರತ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡಿದ ಅವರು, ಪಕ್ಷದ ನಾಯಕರು ಹಾಗೂ ಪಕ್ಷೇತರರು ಜತೆಗೂಡಿ ಉತ್ತಮ ಕಾನೂನು ರೂಪಿಸಬೇಕೆಂದು ಸಲಹೆ ಮಾಡಿದರು.