ಹೇಮಾವತಿ ಅಣೆ ಕಾರ್ಯ ತಡೆಗೆ ಕೇಂದ್ರಕ್ಕೆ ಒತ್ತಾಯ
ಮದ್ರಾಸ್, ಜುಲೈ 8– ಕಾವೇರಿ ಜಲವಿವಾದವನ್ನು ತಕ್ಷಣ ಪಂಚಾಯಿತಿಗೆ ಒಪ್ಪಿಸುವಂತೆ ಹಾಗೂ ಹೇಮಾವತಿ ಮತ್ತಿತರ ಕಾವೇರಿ ಯೋಜನೆಗಳ ನಿರ್ಮಾಣ ಕಾರ್ಯದಲ್ಲಿ ಮುಂದುವರಿಯದಂತೆ ಮೈಸೂರು ಸರ್ಕಾರವನ್ನು ತಡೆಯುವಂತೆ ತಮಿಳುನಾಡು ವಿಧಾನಸಭೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.