ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 9–7–1971

Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

ಕನ್ನಡಾಂಬೆಯ ನೆಚ್ಚಿನ ಕುವರ ಅನಕೃ ನಿಧನ
ಬೆಂಗಳೂರು, ಜುಲೈ 8–
ಕನ್ನಡ ಕಾದಂಬರಿಯ ಸಾರ್ವಭೌಮ ಅನಕೃ ಇಂದು ರಾತ್ರಿ ಸುಮಾರು 10.30ರ ಸಮಯದಲ್ಲಿ ಇಲ್ಲಿ ನಿಧನರಾದರು.

ಕನ್ನಡ ಕಾದಂಬರಿಯಿಂದ ಹಿಡಿದು ಕನ್ನಡ ಚಳವಳಿಯವರೆಗೆ ನಾಡು–ನುಡಿಗಾಗಿ ನಿರಂತರ ಹೋರಾಟ ನಡೆಸಿದ ಅ.ನ.ಕೃಷ್ಣರಾಯರನ್ನು ಉಳಿಸಲು ನಗರದ ನರ್ಸಿಂಗ್‌ ಹೋಮಿನ ವೈದ್ಯರು ವಿಶೇಷವಾಗಿ ಪ್ರಯತ್ನಿಸಿದರು.

ಹೇಮಾವತಿ ಅಣೆ ಕಾರ್ಯ ತಡೆಗೆ ಕೇಂದ್ರಕ್ಕೆ ಒತ್ತಾಯ
ಮದ್ರಾಸ್‌, ಜುಲೈ 8–
ಕಾವೇರಿ ಜಲವಿವಾದವನ್ನು ತಕ್ಷಣ ಪಂಚಾಯಿತಿಗೆ ಒಪ್ಪಿಸುವಂತೆ ಹಾಗೂ ಹೇಮಾವತಿ ಮತ್ತಿತರ ಕಾವೇರಿ ಯೋಜನೆಗಳ ನಿರ್ಮಾಣ ಕಾರ್ಯದಲ್ಲಿ ಮುಂದುವರಿಯದಂತೆ ಮೈಸೂರು ಸರ್ಕಾರವನ್ನು ತಡೆಯುವಂತೆ ತಮಿಳುನಾಡು ವಿಧಾನಸಭೆ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.

ಕೇಂದ್ರ ಸರ್ಕಾರವನ್ನು ಈ ರೀತಿ ಒತ್ತಾಯಪಡಿಸುವ ನಿರ್ಣಯವೊಂದನ್ನು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT