ತಿರುಚೂರು, ಮೇ 15– ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಸಂಸ್ಥಾ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಶ್ರೀ ಎಸ್.ನಿಜಲಿಂಗಪ್ಪನವರು ‘ರಾಹು’ವಿಗೆ ಹೋಲಿಸಿ, ಸದ್ಯಕ್ಕೆ ತಮ್ಮ ಪಕ್ಷ ಅದರ ಮಬ್ಬಿನಲ್ಲಿ ಮರೆಯಾಗಿದೆಯೆಂದು ಒಪ್ಪಿಕೊಂಡರು.
ನಿನ್ನೆ ರಾತ್ರಿ ಇಲ್ಲಿ ಅವರು ಭಾರಿ ಬಹಿರಂಗ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿ, ‘ಅತ್ಯಂತ ಕೆಂಪಗೆ ಕಾದಿರುವ ಸೂರ್ಯನಿಗೆ ಸಹ ಕೆಲವೊಮ್ಮೆ ರಾಹು ಬಡಿಯುತ್ತದೆ. ಈಗ ಕಾಂಗ್ರೆಸ್ ಸಂಸ್ಥೆ ಒಂದು ರಾಹುವಿನ– ಇಂದಿರಾ– ಮಬ್ಬಿಗೆ ಗುರಿಯಾಗಿದೆ’ಎಂದರು.
ಸಂಸ್ಥಾ ಕಾಂಗ್ರೆಸ್ಸೇ ‘ಅಸಲಿ ಕಾಂಗ್ರೆಸ್’ ಎಂದು ಹೇಳಿಕೊಂಡ ಅವರು, ಕಾಂಗ್ರೆಸ್ (ಐ) ‘ಇಮಿಟೇಷನ್ (ನಕಲಿ) ಅಥವಾ ಇಂದಿರಾ ಕಾಂಗ್ರೆಸ್’ ಎಂದರು.