ನವದೆಹಲಿ, ಜು. 30– ಲಂಡನ್ನಿನಲ್ಲಿ ಮೈಸೂರು ಸರ್ಕಾರದ ವಾಣಿಜ್ಯ ಪ್ರತಿನಿಧಿ ಕಚೇರಿಯನ್ನು ಮುಂದುವ
ರೆಸುವ ಕ್ರಮದ ರಾಜ್ಯಾಂಗ ಬದ್ಧತೆ ಹಾಗೂ ಪ್ರಸಕ್ತ ಕಾಂಗ್ರೆಸ್ ಅಧ್ಯಕ್ಷರೂ ಮಾಜಿ ಮುಖ್ಯಮಂತ್ರಿಯೂ ಆದ ಶ್ರೀ ಎಸ್. ನಿಜಲಿಂಗಪ್ಪನವರ ಅಳಿಯಂದಿರಲ್ಲೊಬ್ಬರಾದ ಶ್ರೀ ಎಸ್.ಬಿ.
ಮುದ್ದಪ್ಪ ಅವರನ್ನು ಆ ಹುದ್ದೆಗೆ ನೇಮಕ ಮಾಡುವುದರ ಔಚಿತ್ಯದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ತೀವ್ರ ಚರ್ಚೆ ನಡೆದು ಕೋಲಾಹಲವುಂಟಾಯಿತು.