<p><strong>ವಿಧ್ವಂಸಕ ಕೃತ್ಯ... ಗೂಢಚರ್ಯೆ ಪಾಕಿಸ್ತಾನ್ ರಾಜತಂತ್ರಜ್ಞನ ಉಚ್ಚಾಟನೆ</strong></p>.<p><strong>(ನಮ್ಮ ವಿಶೇಷ ಪ್ರತಿನಿಧಿಯಿಂದ)</strong></p>.<p><strong>ನವದೆಹಲಿ, ಜ. 6–</strong> ಇಲ್ಲಿ ಪಾಕಿಸ್ತಾನ ಹೈಕಮೀಷನ್ನಿನ ಕಾನ್ಸೆಲರ್ ಎಂ.ಎಂ. ಅಹಮದ್ ಅವರು 24 ಗಂಟೆಗಳೊಳಗಾಗಿ ಭಾರತವನ್ನು ತ್ಯಜಿಸಬೇಕೆಂದು ಸರ್ಕಾರ ತಿಳಿಸಿದೆ.</p>.<p>ಪಾಕಿಸ್ತಾನಿ ರಾಜತಂತ್ರಜ್ಞ ಭಾರತ ಬಿಡಬೇಕೆಂದು ತಿಳಿಸಿದ ಪತ್ರವನ್ನು ವಿದೇಶಾಂಗ ಖಾತೆಯಲ್ಲಿ ಪಾಕಿಸ್ತಾನಿ ವಿಭಾಗದ ಕಾರ್ಯದರ್ಶಿಯಾಗಿರುವ ಶ್ರೀ ಪಿ.ಆರ್.ಎಸ್. ಮಣಿ ಅವರು ಪಾಕಿಸ್ತಾನ ಡೆಪ್ಯುಟಿ ಹೈಕಮಿಷನರ್ ಅಬ್ದುಲ್ ರಾಫ್ ಖಾನ್ ಅವರಿಗೆ ಇಂದು ಸಂಜೆ 7.30ಕ್ಕೆ ನೀಡಲಾಯಿತು.</p>.<p>ಭಾರತದ ಭದ್ರತೆಗೆ ಅಪಾಯವೊಡ್ಡುವ ಗೂಢಚರ್ಯೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಅವರು ತೊಡಗಿದ್ದರೆಂದು ಭಾರತ ಸರ್ಕಾರ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.</p>.<p><strong>ಪಾಕಿಸ್ತಾನದಿಂದ ಭಾರತದ ಹೈಕಮಿಷನ್ </strong><strong>ಕಾರ್ಯದರ್ಶಿ ಶ್ರೀ ಓಜಾ ಉಚ್ಚಾಟನೆ</strong></p>.<p><strong>ನವದೆಹಲಿ, ಜ. 6– </strong>ಡಾಕ್ಕಾದಲ್ಲಿರುವ ಭಾರತದ ಡೆಪ್ಯುಟಿ ಹೈಕಮಿಷನ್ ಕಚೇರಿಯ ಪ್ರಥಮ ಕಾರ್ಯದರ್ಶಿ ಶ್ರೀ ಪಿ.ಎನ್. ಓಜಾ ಅವರನ್ನು ಪಾಕಿಸ್ತಾನ ಇಂದು ಉಚ್ಛಾಟಿಸಿದೆ.</p>.<p>ಇಂದು ರಾತ್ರಿ ಡಾಕ್ಕಾವನ್ನು ಬಿಡಬೇಕೆಂದು ಶ್ರೀ ಓಜಾ ಅವರಿಗೆ ತಿಳಿಸಲಾಗಿದೆ.</p>.<p><strong>ಷೇಖ್ರನ್ನು ಭಾರತದ ಹೊರಗೆ ಬಿಡುವುದು ಸಲ್ಲದು: ಹನುಮಂತಯ್ಯ</strong></p>.<p><strong>ನವದೆಹಲಿ, ಜ. 6– </strong>ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಜತೆ ಸಂಧಾನ ನಡೆಸಲು ಅಥವಾ ಇನ್ನಾವುದೇ ಉದ್ದೇಶಕ್ಕೆ ಷೇಖ್ ಅಬ್ದುಲ್ಲಾ ಅವರನ್ನು ಭಾರತದ ಹೊರಗೆ ಕಳಿಸುವುದನ್ನು ಯೋಚಿಸುವುದು ಕೂಡ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಉಪ ನಾಯಕ ಶ್ರೀ ಹನುಮಂತಯ್ಯ ಇಂದು ಇಲ್ಲಿ ಹೇಳಿದರು.</p>.<p>ಷೇಖ್ ಅವರ ಹೇಳಿಕೆಯ ಕಾಯ್ದೆ ಅರ್ಥ ವ್ಯಾಪ್ತಿ ಎಷ್ಟೆಂದು ಸರ್ಕಾರ ಪರಿಶೀಲಿಸಬೇಕೆಂದು ಶ್ರೀ ಹನುಮಂತಯ್ಯ ಒತ್ತಾಯಪಡಿಸಿದರು.</p>.<p><strong>ಉರಗ ಉಡುಗೊರೆ</strong></p>.<p><strong>ಪಣಜಿ, ಜ. 6– </strong>ಇಲ್ಲಿನ ಪತ್ರಕರ್ತರೊಬ್ಬರಿಗೆ ಕಳೆದವಾರ ವಿಷಮಯ ಕಾಣಿಕೆಯೊಂದು ದೊರೆಯಿತು.</p>.<p>ಇಂಗ್ಲೀಷ್ ದೈನಿಕವೊಂದರಲ್ಲಿ ಕೆಲಸ ಮಾಡುತ್ತಿರುವ ಮೈಸಿರಿಲ್ ಡಿ. ಕುನ್ಹ ಅವರು ಬುಧವಾರ ತಮ್ಮ ಕಚೇರಿಗೋದಾಗ ಹೊಸ ವರ್ಷದ ಶುಭಾಶಯ’ ಅವರಿಗಾಗಿ ಕಾದಿತ್ತು.</p>.<p>ಇಪ್ಪತ್ತೈದು ಪೈಸೆ ಅಂಚೆ ಚೀಟಿ ಅಂಟಿಸಿಕೊಂಡು ಬಂದಿದ್ದ ಶುಭಾಶಯದ ಲಕೋಟೆಯನ್ನು ತೆರೆದಾಗ, ಅದರಲ್ಲಿ ಜೀವಂತ ಹಾವು ಇದ್ದುದನ್ನು ನೋಡಿ ಕುನ್ಹ ಮತ್ತು ಅವರ ಸಹೋದ್ಯೋಗಿಗಳು ಹೌಹಾರಿದರು. ಈ ಹಾವಿನ ಜೊತೆಗೆ ‘ಶುಭಾಶಯಗಳೊಡನೆ’ ಎಂಬ ಚೀಟಿ ಬೇರೆ.</p>.<p><strong>ಲಂಡನ್ನಿನಿಂದ ಚೀನಕ್ಕೆ ಚಿನ್ನ</strong></p>.<p><strong>ಲಂಡನ್, ಜ. 6– </strong>ದೀರ್ಘಕಾಲದ ನಂತರ ಚೀನ ಪುನಃ ಲಂಡನ್ ಮಾರುಕಟ್ಟೆಯಿಂದ ಚಿನ್ನ ಕೊಳ್ಳಲಾರಂಭಿಸಿದೆ.</p>.<p>ನಿನ್ನೆ ಲಂಡನ್ನಿನಿಂದ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಚೀನಕ್ಕೆ ಸಾಗಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಧ್ವಂಸಕ ಕೃತ್ಯ... ಗೂಢಚರ್ಯೆ ಪಾಕಿಸ್ತಾನ್ ರಾಜತಂತ್ರಜ್ಞನ ಉಚ್ಚಾಟನೆ</strong></p>.<p><strong>(ನಮ್ಮ ವಿಶೇಷ ಪ್ರತಿನಿಧಿಯಿಂದ)</strong></p>.<p><strong>ನವದೆಹಲಿ, ಜ. 6–</strong> ಇಲ್ಲಿ ಪಾಕಿಸ್ತಾನ ಹೈಕಮೀಷನ್ನಿನ ಕಾನ್ಸೆಲರ್ ಎಂ.ಎಂ. ಅಹಮದ್ ಅವರು 24 ಗಂಟೆಗಳೊಳಗಾಗಿ ಭಾರತವನ್ನು ತ್ಯಜಿಸಬೇಕೆಂದು ಸರ್ಕಾರ ತಿಳಿಸಿದೆ.</p>.<p>ಪಾಕಿಸ್ತಾನಿ ರಾಜತಂತ್ರಜ್ಞ ಭಾರತ ಬಿಡಬೇಕೆಂದು ತಿಳಿಸಿದ ಪತ್ರವನ್ನು ವಿದೇಶಾಂಗ ಖಾತೆಯಲ್ಲಿ ಪಾಕಿಸ್ತಾನಿ ವಿಭಾಗದ ಕಾರ್ಯದರ್ಶಿಯಾಗಿರುವ ಶ್ರೀ ಪಿ.ಆರ್.ಎಸ್. ಮಣಿ ಅವರು ಪಾಕಿಸ್ತಾನ ಡೆಪ್ಯುಟಿ ಹೈಕಮಿಷನರ್ ಅಬ್ದುಲ್ ರಾಫ್ ಖಾನ್ ಅವರಿಗೆ ಇಂದು ಸಂಜೆ 7.30ಕ್ಕೆ ನೀಡಲಾಯಿತು.</p>.<p>ಭಾರತದ ಭದ್ರತೆಗೆ ಅಪಾಯವೊಡ್ಡುವ ಗೂಢಚರ್ಯೆ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಅವರು ತೊಡಗಿದ್ದರೆಂದು ಭಾರತ ಸರ್ಕಾರ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.</p>.<p><strong>ಪಾಕಿಸ್ತಾನದಿಂದ ಭಾರತದ ಹೈಕಮಿಷನ್ </strong><strong>ಕಾರ್ಯದರ್ಶಿ ಶ್ರೀ ಓಜಾ ಉಚ್ಚಾಟನೆ</strong></p>.<p><strong>ನವದೆಹಲಿ, ಜ. 6– </strong>ಡಾಕ್ಕಾದಲ್ಲಿರುವ ಭಾರತದ ಡೆಪ್ಯುಟಿ ಹೈಕಮಿಷನ್ ಕಚೇರಿಯ ಪ್ರಥಮ ಕಾರ್ಯದರ್ಶಿ ಶ್ರೀ ಪಿ.ಎನ್. ಓಜಾ ಅವರನ್ನು ಪಾಕಿಸ್ತಾನ ಇಂದು ಉಚ್ಛಾಟಿಸಿದೆ.</p>.<p>ಇಂದು ರಾತ್ರಿ ಡಾಕ್ಕಾವನ್ನು ಬಿಡಬೇಕೆಂದು ಶ್ರೀ ಓಜಾ ಅವರಿಗೆ ತಿಳಿಸಲಾಗಿದೆ.</p>.<p><strong>ಷೇಖ್ರನ್ನು ಭಾರತದ ಹೊರಗೆ ಬಿಡುವುದು ಸಲ್ಲದು: ಹನುಮಂತಯ್ಯ</strong></p>.<p><strong>ನವದೆಹಲಿ, ಜ. 6– </strong>ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಜತೆ ಸಂಧಾನ ನಡೆಸಲು ಅಥವಾ ಇನ್ನಾವುದೇ ಉದ್ದೇಶಕ್ಕೆ ಷೇಖ್ ಅಬ್ದುಲ್ಲಾ ಅವರನ್ನು ಭಾರತದ ಹೊರಗೆ ಕಳಿಸುವುದನ್ನು ಯೋಚಿಸುವುದು ಕೂಡ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಉಪ ನಾಯಕ ಶ್ರೀ ಹನುಮಂತಯ್ಯ ಇಂದು ಇಲ್ಲಿ ಹೇಳಿದರು.</p>.<p>ಷೇಖ್ ಅವರ ಹೇಳಿಕೆಯ ಕಾಯ್ದೆ ಅರ್ಥ ವ್ಯಾಪ್ತಿ ಎಷ್ಟೆಂದು ಸರ್ಕಾರ ಪರಿಶೀಲಿಸಬೇಕೆಂದು ಶ್ರೀ ಹನುಮಂತಯ್ಯ ಒತ್ತಾಯಪಡಿಸಿದರು.</p>.<p><strong>ಉರಗ ಉಡುಗೊರೆ</strong></p>.<p><strong>ಪಣಜಿ, ಜ. 6– </strong>ಇಲ್ಲಿನ ಪತ್ರಕರ್ತರೊಬ್ಬರಿಗೆ ಕಳೆದವಾರ ವಿಷಮಯ ಕಾಣಿಕೆಯೊಂದು ದೊರೆಯಿತು.</p>.<p>ಇಂಗ್ಲೀಷ್ ದೈನಿಕವೊಂದರಲ್ಲಿ ಕೆಲಸ ಮಾಡುತ್ತಿರುವ ಮೈಸಿರಿಲ್ ಡಿ. ಕುನ್ಹ ಅವರು ಬುಧವಾರ ತಮ್ಮ ಕಚೇರಿಗೋದಾಗ ಹೊಸ ವರ್ಷದ ಶುಭಾಶಯ’ ಅವರಿಗಾಗಿ ಕಾದಿತ್ತು.</p>.<p>ಇಪ್ಪತ್ತೈದು ಪೈಸೆ ಅಂಚೆ ಚೀಟಿ ಅಂಟಿಸಿಕೊಂಡು ಬಂದಿದ್ದ ಶುಭಾಶಯದ ಲಕೋಟೆಯನ್ನು ತೆರೆದಾಗ, ಅದರಲ್ಲಿ ಜೀವಂತ ಹಾವು ಇದ್ದುದನ್ನು ನೋಡಿ ಕುನ್ಹ ಮತ್ತು ಅವರ ಸಹೋದ್ಯೋಗಿಗಳು ಹೌಹಾರಿದರು. ಈ ಹಾವಿನ ಜೊತೆಗೆ ‘ಶುಭಾಶಯಗಳೊಡನೆ’ ಎಂಬ ಚೀಟಿ ಬೇರೆ.</p>.<p><strong>ಲಂಡನ್ನಿನಿಂದ ಚೀನಕ್ಕೆ ಚಿನ್ನ</strong></p>.<p><strong>ಲಂಡನ್, ಜ. 6– </strong>ದೀರ್ಘಕಾಲದ ನಂತರ ಚೀನ ಪುನಃ ಲಂಡನ್ ಮಾರುಕಟ್ಟೆಯಿಂದ ಚಿನ್ನ ಕೊಳ್ಳಲಾರಂಭಿಸಿದೆ.</p>.<p>ನಿನ್ನೆ ಲಂಡನ್ನಿನಿಂದ ಭಾರಿ ಪ್ರಮಾಣದಲ್ಲಿ ಚಿನ್ನವನ್ನು ಚೀನಕ್ಕೆ ಸಾಗಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>