<p>ಮಂಗಳವಾರ, 20.02.2001</p><p>ನವದೆಹಲಿ, ಫೆ. 19– ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಅಂದು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಆಪಾದಿಸಿದರು.</p>.<p>ಮಸೀದಿ ಧ್ವಂಸ ಪ್ರಕರಣದ ತನಿಖೆ ನಡೆಸುತ್ತಿರುವ ಲಿಬರ್ಹಾನ್ ಆಯೋಗದ ಮುಂದೆ ಅವರು ಇಂದು ಸಾಕ್ಷಿ ನೀಡಿದರು. ಮಸೀದಿಯನ್ನು ರಕ್ಷಿಸುವುದಾಗಿ ಕಲ್ಯಾಣ್ ಸಿಂಗ್ ಸರ್ಕಾರ ತಮಗೆ ಹಲವು ವೇದಿಕೆಗಳಲ್ಲಿ ‘ಸ್ಪಷ್ಟ ಮತ್ತು ನಿಖರ ಭರವಸೆ’ ನೀಡಿತ್ತು ಎಂದು ಅವರು ಹೇಳಿದರು.</p>.<p><strong>ಬೆಂಬಲ ಬೆಲೆ ಖರೀದಿ ಕೈಬಿಡಲು ಕೇಂದ್ರ ಪರಿಶೀಲನೆ</strong></p>.<p>ಬೆಂಗಳೂರು, ಫೆ. 19– ಬೆಂಬಲ ಬೆಲೆ ನೀಡಿ ಧಾನ್ಯಗಳನ್ನು ಖರೀದಿ ಮಾಡುವುದರಿಂದ ಸಹಾಯಧನದ ರೂಪದಲ್ಲಿ ಬೊಕ್ಕಸದ ಮೇಲೆ ತೀವ್ರ ಹೊರೆ ಬೀಳುತ್ತಿರುವುದರಿಂದ ಮುಂದಿನ ವರ್ಷದಿಂದ ಬೆಂಬಲ ಬೆಲೆ ಖರೀದಿಯನ್ನೇ ಕೇಂದ್ರ ಸರ್ಕಾರ ಕೈಬಿಡಲು ಚಿಂತಿಸುತ್ತಿದೆ.</p>.<p>ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಶಾಂತಕುಮಾರ್ ಅವರು ಈಚೆಗೆ ಈ ಇಂಗಿತ ವ್ಯಕ್ತಪಡಿಸಿದ್ದು, ಆ ಸಭೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೂ ಭಾಗವಹಿಸಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳವಾರ, 20.02.2001</p><p>ನವದೆಹಲಿ, ಫೆ. 19– ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಅಂದು ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಆಪಾದಿಸಿದರು.</p>.<p>ಮಸೀದಿ ಧ್ವಂಸ ಪ್ರಕರಣದ ತನಿಖೆ ನಡೆಸುತ್ತಿರುವ ಲಿಬರ್ಹಾನ್ ಆಯೋಗದ ಮುಂದೆ ಅವರು ಇಂದು ಸಾಕ್ಷಿ ನೀಡಿದರು. ಮಸೀದಿಯನ್ನು ರಕ್ಷಿಸುವುದಾಗಿ ಕಲ್ಯಾಣ್ ಸಿಂಗ್ ಸರ್ಕಾರ ತಮಗೆ ಹಲವು ವೇದಿಕೆಗಳಲ್ಲಿ ‘ಸ್ಪಷ್ಟ ಮತ್ತು ನಿಖರ ಭರವಸೆ’ ನೀಡಿತ್ತು ಎಂದು ಅವರು ಹೇಳಿದರು.</p>.<p><strong>ಬೆಂಬಲ ಬೆಲೆ ಖರೀದಿ ಕೈಬಿಡಲು ಕೇಂದ್ರ ಪರಿಶೀಲನೆ</strong></p>.<p>ಬೆಂಗಳೂರು, ಫೆ. 19– ಬೆಂಬಲ ಬೆಲೆ ನೀಡಿ ಧಾನ್ಯಗಳನ್ನು ಖರೀದಿ ಮಾಡುವುದರಿಂದ ಸಹಾಯಧನದ ರೂಪದಲ್ಲಿ ಬೊಕ್ಕಸದ ಮೇಲೆ ತೀವ್ರ ಹೊರೆ ಬೀಳುತ್ತಿರುವುದರಿಂದ ಮುಂದಿನ ವರ್ಷದಿಂದ ಬೆಂಬಲ ಬೆಲೆ ಖರೀದಿಯನ್ನೇ ಕೇಂದ್ರ ಸರ್ಕಾರ ಕೈಬಿಡಲು ಚಿಂತಿಸುತ್ತಿದೆ.</p>.<p>ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಶಾಂತಕುಮಾರ್ ಅವರು ಈಚೆಗೆ ಈ ಇಂಗಿತ ವ್ಯಕ್ತಪಡಿಸಿದ್ದು, ಆ ಸಭೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳೂ ಭಾಗವಹಿಸಿದ್ದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>