<p>ವಿಜಾಪುರ, ಫೆ. 17– ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಬಿಟ್ಟಿರುವ ನೀರು ಇಂದು ಸಂಜೆ ಸುಮಾರು 4.30ರ ವೇಳೆಗೆ ಜಿಲ್ಲೆಯ ಇಂಡಿ ತಾಲ್ಲೂಕಿನ ಗಡಿಯಲ್ಲಿರುವ ಟಾಕಳಿ ಸೇತುವೆಗೆ ತಲಪಿ ಮುಂದೆ ಹರಿದಿದ್ದು, ಇದನ್ನು ಕಣ್ಣಾರೆ ಕಂಡ ರೈತರು ಆಮರಣ ನಿರಶನವನ್ನು ಅಂತ್ಯಗೊಳಿಸಿದರು.</p>.<p>ಇಂದು ಮುಂಜಾನೆ ಭೀಮಾ ನದಿ ನೀರು ಟಾಕಳಿ ಸೇತುವೆಗೆ ಸಮೀಪದ ಮಹಾರಾಷ್ಟ್ರದ ಔಟ್–ಶಿರನಾಳ ಬ್ಯಾರೇಜ್ ತಲಪಿತ್ತು. ಅಧಿಕೃತ ಮೂಲಗಳ ಪ್ರಕಾರ ಈ ಬ್ಯಾರೇಜ್ನಿಂದ ಹರಿವಿನ ಪ್ರಮಾಣ 600–700 ಕ್ಯುಸೆಕ್ ಇತ್ತು.</p>.<p><strong>ಗೇರುಸೊಪ್ಪಾದಲ್ಲಿ ವಿದ್ಯುತ್ ಘಟಕ ಕಾರ್ಯಾರಂಭ</strong></p>.<p>ಜೋಗ್ಫಾಲ್ಸ್, ಫೆ. 17– ಇಲ್ಲಿಗೆ ಸಮೀಪದ ಗೇರುಸೊಪ್ಪಾದಲ್ಲಿ ಶರಾವತಿ ಟೇಲ್ರೇಸ್ ಯೋಜನೆಯ 60 ಮೆಗಾವಾಟ್ ಸಾಮರ್ಥ್ಯದ ಮೊದಲ ವಿದ್ಯುತ್ ಉತ್ಪಾದನಾ ಘಟಕವನ್ನು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ರಾಮಲಿಂಗಂ ಅವರು, ಶುಕ್ರವಾರ ಮಧ್ಯಾಹ್ನ ಉದ್ಘಾಟಿಸಿದರು.</p>.<p>ನಿಗದಿತ ಅವಧಿಗೆ ಆರು ತಿಂಗಳು ಮುಂಚಿತವಾಗಿ ಯೋಜನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ, ಫೆ. 17– ಮಹಾರಾಷ್ಟ್ರ ಸರ್ಕಾರ ಭೀಮಾ ನದಿಗೆ ಬಿಟ್ಟಿರುವ ನೀರು ಇಂದು ಸಂಜೆ ಸುಮಾರು 4.30ರ ವೇಳೆಗೆ ಜಿಲ್ಲೆಯ ಇಂಡಿ ತಾಲ್ಲೂಕಿನ ಗಡಿಯಲ್ಲಿರುವ ಟಾಕಳಿ ಸೇತುವೆಗೆ ತಲಪಿ ಮುಂದೆ ಹರಿದಿದ್ದು, ಇದನ್ನು ಕಣ್ಣಾರೆ ಕಂಡ ರೈತರು ಆಮರಣ ನಿರಶನವನ್ನು ಅಂತ್ಯಗೊಳಿಸಿದರು.</p>.<p>ಇಂದು ಮುಂಜಾನೆ ಭೀಮಾ ನದಿ ನೀರು ಟಾಕಳಿ ಸೇತುವೆಗೆ ಸಮೀಪದ ಮಹಾರಾಷ್ಟ್ರದ ಔಟ್–ಶಿರನಾಳ ಬ್ಯಾರೇಜ್ ತಲಪಿತ್ತು. ಅಧಿಕೃತ ಮೂಲಗಳ ಪ್ರಕಾರ ಈ ಬ್ಯಾರೇಜ್ನಿಂದ ಹರಿವಿನ ಪ್ರಮಾಣ 600–700 ಕ್ಯುಸೆಕ್ ಇತ್ತು.</p>.<p><strong>ಗೇರುಸೊಪ್ಪಾದಲ್ಲಿ ವಿದ್ಯುತ್ ಘಟಕ ಕಾರ್ಯಾರಂಭ</strong></p>.<p>ಜೋಗ್ಫಾಲ್ಸ್, ಫೆ. 17– ಇಲ್ಲಿಗೆ ಸಮೀಪದ ಗೇರುಸೊಪ್ಪಾದಲ್ಲಿ ಶರಾವತಿ ಟೇಲ್ರೇಸ್ ಯೋಜನೆಯ 60 ಮೆಗಾವಾಟ್ ಸಾಮರ್ಥ್ಯದ ಮೊದಲ ವಿದ್ಯುತ್ ಉತ್ಪಾದನಾ ಘಟಕವನ್ನು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಯೋತಿ ರಾಮಲಿಂಗಂ ಅವರು, ಶುಕ್ರವಾರ ಮಧ್ಯಾಹ್ನ ಉದ್ಘಾಟಿಸಿದರು.</p>.<p>ನಿಗದಿತ ಅವಧಿಗೆ ಆರು ತಿಂಗಳು ಮುಂಚಿತವಾಗಿ ಯೋಜನೆ ಪೂರ್ಣಗೊಂಡಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>