<p><strong>ಕನ್ನಡ ನೆಲ ಮುಟ್ಟಿ ನಮಿಸಿದ ಡಾ. ರಾಜ್ ಕುಮಾರ್</strong></p>.<p>ಬೆಂಗಳೂರು, ನ. 16– ದಟ್ಟ ಕಾನನದಲ್ಲಿ ಮೂರುವರೆ ತಿಂಗಳುಗಳ ಕಾಲ ‘ವನವಾಸ’ ಮುಗಿಸಿ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಕನ್ನಡದ ಮೇರುನಟ, ಕನ್ನಡಿಗರ ಕಣ್ಮಣಿ ಡಾ. ರಾಜ್ಕುಮಾರ್ ಅವರಿಗೆ ಸಾವಿರಾರು ಅಭಿಮಾನಿಗಳು ಮತ್ತು ಬಂಧುಗಳು ಆತ್ಮೀಯ ಸ್ವಾಗತ ನೀಡಿದರು.</p>.<p>ಅದೇ ರೀತಿ ತಮ್ಮ ಅಭಿಮಾನಿ ‘ದೇವರುಗಳನ್ನು’ ಕಂಡ ರಾಜ್, ತುಂಬು ಹೃದಯದಿಂದ ಎಲ್ಲವನ್ನೂ ಸ್ವೀಕರಿಸಿ ಭಾವಪರವಶರಾದರು.</p>.<p><strong>ಸಾಕ್ಷರತೆಗಾಗಿ ‘ಸರ್ವ ಶಿಕ್ಷಾ ಅಭಿಯಾನ’</strong></p>.<p>ನವದೆಹಲಿ, ನ. 16 (ಪಿಟಿಐ)– ದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ‘ಸರ್ವ ಶಿಕ್ಷಾ ಅಭಿಯಾನ’ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿತು.</p>.<p>2010ರ ವೇಳೆಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಗುರಿಯನ್ನು ಸಾಧಿಸುವ ಸಮಗ್ರ ಕಾರ್ಯಕ್ರಮವಾಗಿರುವ ಈ ಯೋಜನೆಯ ಪ್ರಕಾರ 6ರಿಂದ 14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ 2003ರ ವೇಳೆಗೆ ಶಿಕ್ಷಣ ದೊರೆಯುವಂತೆ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್, ಸಂಪುಟ ಸಭೆಯ ನಂತರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕನ್ನಡ ನೆಲ ಮುಟ್ಟಿ ನಮಿಸಿದ ಡಾ. ರಾಜ್ ಕುಮಾರ್</strong></p>.<p>ಬೆಂಗಳೂರು, ನ. 16– ದಟ್ಟ ಕಾನನದಲ್ಲಿ ಮೂರುವರೆ ತಿಂಗಳುಗಳ ಕಾಲ ‘ವನವಾಸ’ ಮುಗಿಸಿ ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಕನ್ನಡದ ಮೇರುನಟ, ಕನ್ನಡಿಗರ ಕಣ್ಮಣಿ ಡಾ. ರಾಜ್ಕುಮಾರ್ ಅವರಿಗೆ ಸಾವಿರಾರು ಅಭಿಮಾನಿಗಳು ಮತ್ತು ಬಂಧುಗಳು ಆತ್ಮೀಯ ಸ್ವಾಗತ ನೀಡಿದರು.</p>.<p>ಅದೇ ರೀತಿ ತಮ್ಮ ಅಭಿಮಾನಿ ‘ದೇವರುಗಳನ್ನು’ ಕಂಡ ರಾಜ್, ತುಂಬು ಹೃದಯದಿಂದ ಎಲ್ಲವನ್ನೂ ಸ್ವೀಕರಿಸಿ ಭಾವಪರವಶರಾದರು.</p>.<p><strong>ಸಾಕ್ಷರತೆಗಾಗಿ ‘ಸರ್ವ ಶಿಕ್ಷಾ ಅಭಿಯಾನ’</strong></p>.<p>ನವದೆಹಲಿ, ನ. 16 (ಪಿಟಿಐ)– ದೇಶದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ‘ಸರ್ವ ಶಿಕ್ಷಾ ಅಭಿಯಾನ’ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಇಂದು ನಿರ್ಧರಿಸಿತು.</p>.<p>2010ರ ವೇಳೆಗೆ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಗುರಿಯನ್ನು ಸಾಧಿಸುವ ಸಮಗ್ರ ಕಾರ್ಯಕ್ರಮವಾಗಿರುವ ಈ ಯೋಜನೆಯ ಪ್ರಕಾರ 6ರಿಂದ 14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ 2003ರ ವೇಳೆಗೆ ಶಿಕ್ಷಣ ದೊರೆಯುವಂತೆ ಮಾಡಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್, ಸಂಪುಟ ಸಭೆಯ ನಂತರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>