ಗಾಂಧಿ ಭವನದಲ್ಲಿ ಬೆಳಿಗ್ಗೆ ಸಮ್ಮೇಳನವನ್ನು ಉದ್ಘಾಟಿಸಿದ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಶ್ರೀ ಆರ್.ಆರ್. ದಿವಾಕರ್ ಅವರು, ‘ಕೆಟ್ಟ ಶಕ್ತಿಗಳು ನೆಲೆಯೂರುತ್ತಿರುವ ಇಂದಿನ ರಾಜಕೀಯ ವಾತಾವರಣದ ಶುದ್ಧಿಗೆ ಗಾಂಧಿ ಮಾರ್ಗಾನುಯಾಯಿಗಳ ಸಕ್ರಿಯ ಪಾತ್ರ ಅಗತ್ಯ; ಅವರು ರಾಜಕೀಯದಿಂದ ದೂರವಿದ್ದರೆ, ಗಾಂಧಿ ಸೂತ್ರಗಳು ಬೆಲೆಯಿಲ್ಲದೆ ಹೋದಾವು’ ಎಂದರು.