<p><strong>ರಾಜ್ಯದ ಆರ್ಥಿಕ ಸ್ಥಿತಿ ಗಂಭೀರ: ಕೃಷ್ಣ</strong></p>.<p>ವಿಜಾಪುರ, ಡಿ. 19– ರಾಜ್ಯದ ಹಣಕಾಸು ಸ್ಥಿತಿ ಗಂಭೀರವಾಗಿದ್ದು, ರಾಜ್ಯ ಸರ್ಕಾರ ಇದನ್ನು ಹೇಗೋ ನಿಭಾಯಿಸುತ್ತಿದೆ ಎಂದು ಹಣಕಾಸು ಖಾತೆಯ ಹೊಣೆಗಾರಿಕೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಹೇಳಿದರು.</p>.<p>ಇಲ್ಲಿಗೆ ಸಮೀಪದ ಕೊರ್ತಿ ಗ್ರಾಮದ ಬಳಿ ಕೊರ್ತಿ–ಕೊಲ್ಹಾರ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯುಕೆಪಿ ಸಂತ್ರಸ್ತರಿಗೆ ನೀಡಿರುವ ಪರಿಹಾರ ಧನ ಹೆಚ್ಚಿಸಬೇಕೆಂಬ ಬೇಡಿಕೆ ಕುರಿತು ಮೇಲಿನಂತೆ ಪ್ರತಿಕ್ರಿಯಿಸಿದರು.</p>.<p>ರಾಜ್ಯ ಸರ್ಕಾರ ಯಾವುದೇ ಪರಿಸ್ಥಿತಿಯಲ್ಲಿ ರೈತರ ಹಿತ ಕಡೆಗಣಿಸುವುದಿಲ್ಲ. ಈಗಾಗಲೇ, ಸಂತ್ರಸ್ತರ ಸಮಸ್ಯೆ ಕುರಿತು ಈ ಭಾಗದ ಜನಪ್ರತಿನಿಧಿಗಳ ಜತೆ ಎರಡು ಬಾರಿ ಸಮಾಲೋಚನೆ ನಡೆಸಿದೆ ಎಂದರು.</p>.<p><strong>ಹಿಮಾಚಲ ಪ್ರದೇಶ: ಲಾರಿ ಕಮರಿಗೆ ಬಿದ್ದು 42 ಸಾವು</strong></p>.<p>ಚಂಬಾ (ಹಿಮಾಚಲ ಪ್ರದೇಶ), ಡಿ. 19 (ಪಿಟಿಐ)– ಇಲ್ಲಿಂದ 60 ಕಿ.ಮೀ. ದೂರದ ಚಾಕೋಲಿಯಲ್ಲಿ ಲಾರಿಯೊಂದು ಇಂದು ಬೆಳಿಗ್ಗೆ ಆಳವಾದ ಕಮರಿಗೆ ಬಿದ್ದಿದ್ದು 42 ಮಂದಿ ಮೃತಪಟ್ಟು, ಒಬ್ಬಾತ ಗಾಯಗೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p>ಸತ್ತವರಲ್ಲಿ ಬಹಳಷ್ಟು ಮಂದಿ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಭ್ಯರ್ಥಿಗಳ ಬೆಂಬಲಿಗರಾಗಿದ್ದರು ಎಂದು ಚಂಬಾ ಜಿಲ್ಲಾಧಿಕಾರಿ ಟಿ.ಡಿ. ನೇಗಿ ಅವರು, ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜ್ಯದ ಆರ್ಥಿಕ ಸ್ಥಿತಿ ಗಂಭೀರ: ಕೃಷ್ಣ</strong></p>.<p>ವಿಜಾಪುರ, ಡಿ. 19– ರಾಜ್ಯದ ಹಣಕಾಸು ಸ್ಥಿತಿ ಗಂಭೀರವಾಗಿದ್ದು, ರಾಜ್ಯ ಸರ್ಕಾರ ಇದನ್ನು ಹೇಗೋ ನಿಭಾಯಿಸುತ್ತಿದೆ ಎಂದು ಹಣಕಾಸು ಖಾತೆಯ ಹೊಣೆಗಾರಿಕೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇಂದು ಹೇಳಿದರು.</p>.<p>ಇಲ್ಲಿಗೆ ಸಮೀಪದ ಕೊರ್ತಿ ಗ್ರಾಮದ ಬಳಿ ಕೊರ್ತಿ–ಕೊಲ್ಹಾರ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯುಕೆಪಿ ಸಂತ್ರಸ್ತರಿಗೆ ನೀಡಿರುವ ಪರಿಹಾರ ಧನ ಹೆಚ್ಚಿಸಬೇಕೆಂಬ ಬೇಡಿಕೆ ಕುರಿತು ಮೇಲಿನಂತೆ ಪ್ರತಿಕ್ರಿಯಿಸಿದರು.</p>.<p>ರಾಜ್ಯ ಸರ್ಕಾರ ಯಾವುದೇ ಪರಿಸ್ಥಿತಿಯಲ್ಲಿ ರೈತರ ಹಿತ ಕಡೆಗಣಿಸುವುದಿಲ್ಲ. ಈಗಾಗಲೇ, ಸಂತ್ರಸ್ತರ ಸಮಸ್ಯೆ ಕುರಿತು ಈ ಭಾಗದ ಜನಪ್ರತಿನಿಧಿಗಳ ಜತೆ ಎರಡು ಬಾರಿ ಸಮಾಲೋಚನೆ ನಡೆಸಿದೆ ಎಂದರು.</p>.<p><strong>ಹಿಮಾಚಲ ಪ್ರದೇಶ: ಲಾರಿ ಕಮರಿಗೆ ಬಿದ್ದು 42 ಸಾವು</strong></p>.<p>ಚಂಬಾ (ಹಿಮಾಚಲ ಪ್ರದೇಶ), ಡಿ. 19 (ಪಿಟಿಐ)– ಇಲ್ಲಿಂದ 60 ಕಿ.ಮೀ. ದೂರದ ಚಾಕೋಲಿಯಲ್ಲಿ ಲಾರಿಯೊಂದು ಇಂದು ಬೆಳಿಗ್ಗೆ ಆಳವಾದ ಕಮರಿಗೆ ಬಿದ್ದಿದ್ದು 42 ಮಂದಿ ಮೃತಪಟ್ಟು, ಒಬ್ಬಾತ ಗಾಯಗೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<p>ಸತ್ತವರಲ್ಲಿ ಬಹಳಷ್ಟು ಮಂದಿ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಭ್ಯರ್ಥಿಗಳ ಬೆಂಬಲಿಗರಾಗಿದ್ದರು ಎಂದು ಚಂಬಾ ಜಿಲ್ಲಾಧಿಕಾರಿ ಟಿ.ಡಿ. ನೇಗಿ ಅವರು, ಸುದ್ದಿಗಾರರಿಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>