<p><strong>ಮಂಗಳವಾರ, 20.02.1951</strong></p><p>ದಿವಂಗತ ಶ್ರೀ ಖುರ್ಷಿದ್ ಲಾಲ್ರ ಅಂತ್ಯಕ್ರಿಯೆ </p><p>ನವದೆಹಲಿ, ಫೆ. 18– ಭಾರತ ಸರ್ಕಾರದ ಸಂಪರ್ಕ ಖಾತೆಯ ಉಪ ಸಚಿವರಾದ ಶ್ರೀ ಖುರ್ಷಿದ್ ಲಾಲ್ರವರು ಇಂದು ಬೆಳಿಗ್ಗೆ 10 ಗಂಟೆ 20 ನಿಮಿಷಕ್ಕೆ ದೆಹಲಿಯ ವಿಲಿಂಗ್ಡನ್ ಆಸ್ಪತ್ರೆಯಲ್ಲಿ ಹೃದಯಸ್ಥಂಭನದಿಂದ ಮೃತರಾದರು.</p>.<p>ಎರಡು ಮೈಲಿ ಉದ್ದದ ಮೆರವಣಿಗೆಯು ಜಮುನಾ ಘಾಟ್ ಸೇರಿದ ನಂತರ ಸಂಜೆ ಐದೂ ಕಾಲು ಗಂಟೆಗೆ ಶವಸಂಸ್ಕಾರ ನಡೆಸಲಾಯಿತು. ಮಹಾಪ್ರಧಾನಿ ನೆಹರೂ ಮತ್ತು ಇತರ ಮಂತ್ರಿಗಳೂ, ಪಾರ್ಲಿಮೆಂಟ್ ಸಭಾಧ್ಯಕ್ಷರು ಹಾಗೂ ಸದಸ್ಯರು ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿದ್ದರು.</p>.<p><strong>ಕಾಂಗ್ರೆಸ್ಸಿನೊಡನೆ ಐಕ್ಯತೆ ಸಾಧ್ಯವಿಲ್ಲ</strong></p>.<p>ಮದ್ರಾಸ್, ಫೆ. 18– ಸಮಾಜವಾದಿಗಳು ಪುನಃ ಕಾಂಗ್ರೆಸ್ಸನ್ನು ಸೇರುವ ಸಂಭವ ಕಿಂಚಿತ್ ಮಾತ್ರವೂ ಇಲ್ಲ ಎಂದು ಸಮಾಜವಾದಿ ನಾಯಕರಾದ ಜಯಪ್ರಕಾಶ ನಾರಾಯಣರು ಈ ರಾತ್ರಿ ತಿಳಿಸಿದರು. ಸರ್ದಾರ್ ಪಟೇಲರ ನಿಧನಾನಂತರವೇ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟು ಉಂಟಾಗಬೇಕೆಂದು ಕೂಗೆದ್ದಿರುವುದರ ಕಾರಣವೇನು ಎಂದು ಕೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳವಾರ, 20.02.1951</strong></p><p>ದಿವಂಗತ ಶ್ರೀ ಖುರ್ಷಿದ್ ಲಾಲ್ರ ಅಂತ್ಯಕ್ರಿಯೆ </p><p>ನವದೆಹಲಿ, ಫೆ. 18– ಭಾರತ ಸರ್ಕಾರದ ಸಂಪರ್ಕ ಖಾತೆಯ ಉಪ ಸಚಿವರಾದ ಶ್ರೀ ಖುರ್ಷಿದ್ ಲಾಲ್ರವರು ಇಂದು ಬೆಳಿಗ್ಗೆ 10 ಗಂಟೆ 20 ನಿಮಿಷಕ್ಕೆ ದೆಹಲಿಯ ವಿಲಿಂಗ್ಡನ್ ಆಸ್ಪತ್ರೆಯಲ್ಲಿ ಹೃದಯಸ್ಥಂಭನದಿಂದ ಮೃತರಾದರು.</p>.<p>ಎರಡು ಮೈಲಿ ಉದ್ದದ ಮೆರವಣಿಗೆಯು ಜಮುನಾ ಘಾಟ್ ಸೇರಿದ ನಂತರ ಸಂಜೆ ಐದೂ ಕಾಲು ಗಂಟೆಗೆ ಶವಸಂಸ್ಕಾರ ನಡೆಸಲಾಯಿತು. ಮಹಾಪ್ರಧಾನಿ ನೆಹರೂ ಮತ್ತು ಇತರ ಮಂತ್ರಿಗಳೂ, ಪಾರ್ಲಿಮೆಂಟ್ ಸಭಾಧ್ಯಕ್ಷರು ಹಾಗೂ ಸದಸ್ಯರು ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸಿದ್ದರು.</p>.<p><strong>ಕಾಂಗ್ರೆಸ್ಸಿನೊಡನೆ ಐಕ್ಯತೆ ಸಾಧ್ಯವಿಲ್ಲ</strong></p>.<p>ಮದ್ರಾಸ್, ಫೆ. 18– ಸಮಾಜವಾದಿಗಳು ಪುನಃ ಕಾಂಗ್ರೆಸ್ಸನ್ನು ಸೇರುವ ಸಂಭವ ಕಿಂಚಿತ್ ಮಾತ್ರವೂ ಇಲ್ಲ ಎಂದು ಸಮಾಜವಾದಿ ನಾಯಕರಾದ ಜಯಪ್ರಕಾಶ ನಾರಾಯಣರು ಈ ರಾತ್ರಿ ತಿಳಿಸಿದರು. ಸರ್ದಾರ್ ಪಟೇಲರ ನಿಧನಾನಂತರವೇ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟು ಉಂಟಾಗಬೇಕೆಂದು ಕೂಗೆದ್ದಿರುವುದರ ಕಾರಣವೇನು ಎಂದು ಕೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>