ಹೈದರಾಬಾದ್, ಆ. 28 (ಪಿಟಿಐ, ಯುಎನ್ಐ)– ತಮ್ಮ ಪಕ್ಷದ ಶಾಸಕರ ಬಂಡಾಯದ ವಿರುದ್ಧ ಜನರನ್ನು ಸಂಘಟಿಸಲು ರಾಜ್ಯ ಪ್ರವಾಸ ಹೊರಟಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರು ವಿಧಾನಸಭೆಯಲ್ಲಿ ತಮಗೂ ತಮ್ಮ ಅಳಿಯ ಚಂದ್ರಬಾಬು ನಾಯ್ಡು ಅವರ ಬಣಕ್ಕೂ ಬಲಾಬಲ ಪರೀಕ್ಷೆ ನಡೆಯಲಿರುವ ಆಗಸ್ಟ್ 31ರಂದು ಹೈದರಾಬಾದಿಗೆ ಭಾರಿ ಸಂಖ್ಯೆಯಲ್ಲಿ ಬರುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದರು.