ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಘಾಟಿಸಿದ ಅವರು, ‘ಮೊದಲಿಗೆ ಕಾಂಗ್ರೆಸ್ನಿಂದ ನಂತರ ಜನತಾದಳ ಸರ್ಕಾರದ ಆಡಳಿತದಿಂದ ಜನ ಹತಾಶರಾಗಿದ್ದಾರೆ. ಈಗ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜನ ಬಿಜೆಪಿ ಕಡೆಗೆ ನೋಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎರಡೂ ದಿನಗಳನ್ನು ಎಣಿಸುತ್ತಿವೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಸಮರ್ಥ ಎನಿಸಿಕೊಂಡಿರುವ ಪಟೇಲ್ ಸರ್ಕಾರ ಜನರ ನಗೆಪಾಟಲಿಗೆ ಗುರಿಯಾಗಿದೆ’ ಎಂದು ಅವರು ಹೇಳಿದರು.