ವಾಪಸಾಗಬೇಕಾದದ್ದು ಪಾಕ್ ಪಡೆಯೇ ವಿನಾ ಭಾರತದ್ದಲ್ಲ: ಇಂದಿರಾ
ನವದೆಹಲಿ, ನ. 30– ಗಡಿ ಪ್ರದೇಶಗಳಿಂದ ಭಾರತದ ಪಡೆಗಳನ್ನು ವಾಪಸ್ ಕರೆಸಿ ಕೊಳ್ಳುವ ಸಾಧ್ಯತೆಯನ್ನು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ರಾಜ್ಯಸಭೆಯಲ್ಲಿ ಇಂದು ಖಚಿತವಾಗಿ ತಳ್ಳಿಹಾಕಿದರು.
‘ವಾಪಸಾಗಬೇಕಾಗಿರುವುದು ಬಾಂಗ್ಲಾ ದೇಶದಿಂದ ಪಾಕಿಸ್ತಾನಿ ಪಡೆಗಳು’ ಎಂದು ಅವರು ಹರ್ಷೊದ್ಗಾರಗಳ ಮಧ್ಯೆ ನುಡಿದರು. ‘ಪಾಕಿಸ್ತಾನದ ಪಡೆಗಳು ಬಾಂಗ್ಲಾ ದೇಶದಲ್ಲಿ ಇರುವುದರಿಂದ ಭಾರತದ ರಕ್ಷಣೆಗೆ ಅವು ಬೆದರಿಕೆ ಒಡ್ಡಿವೆ’ಎಂದರು.