ತನಿಖೆಗೆ ಆಗ್ರಹವೆಬ್ಬಿಸಿರುವ ಸಂಸ್ಥಾ ಕಾಂಗ್ರೆಸ್ಸಿಗರನ್ನು ಪ್ರತ್ಯೇಕವಾಗಿ ಒಂದು ಘಟ್ಟದಲ್ಲಿ ಬೊಟ್ಟು ಮಾಡಿ ‘ಲೋಕದಲ್ಲಿ ಜನ ನಿಮ್ಮನ್ನು ನಂಬುತ್ತಾರಾ?’ ಎಂದು ಕೇಳಿದ ಶ್ರಿ ಎಚ್.ಎಂ.ಸಿ. ಅವರು, ‘1962 ಮತ್ತು 67ರಲ್ಲಿ ನಾನೇ ನನ್ನ ವಿರುದ್ಧವೇ ವಿಚಾರಣೆ ಏರ್ಪಡಿಸಿ ಅಂದೆ, ಆಗ ನೀವು ಯಾಕೆ ಮಾಡಲಿಲ್ಲ? ನೀವೇ ಅಧಿಕಾರದಲ್ಲಿದ್ದಿರಿ’ ಎಂದು ಕಾಂಗ್ರೆಸ್ ಸದಸ್ಯರ ಕರತಾಡನಗಳ ಮಧ್ಯೆ ಹೇಳಿದರು.