ಕನಕಪುರ, ನ. 13– ‘ಕನ್ನಡವೇ ಕನ್ನಡಿಗರ ನನ್ನಿಯ ನುಡಿಯಾಗಬೇಕು. ಕನ್ನಡ ಭಾಷೆ ಮತ್ತು ಸಾಹಿತ್ಯದ ಪುರೋಭಿವೃದ್ಧಿ ಸಾಧನೆಯೇ ಕನ್ನಡಿಗರ ಜಪವಾಗಬೇಕಲ್ಲದೆ ಅದರ ಸಿದ್ಧಿಗಾಗಿ ಶಕ್ಯವಿರುವ ಸರ್ವ ಪ್ರಯತ್ನಗಳೂ ನಿರಂತರವಾಗಿ ನಡೆಯಬೇಕು’ ಎಂದು ಕನ್ನಡದ ಸುಪ್ರಸಿದ್ಧ ಸಾಹಿತಿ ಶ್ರೀ ಸಿ.ಕೆ. ವೆಂಕಟರಾಮಯ್ಯ ಅವರು ಇಂದು ಇಲ್ಲಿ ಅರಂಭವಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಕರೆಯಿತ್ತರು.